ನಿಟ್ಟುಸಿರು ಬಿಟ್ಟ ಕವಲಗೇರಿ,ಗೋವನಕೊಪ್ಪ ಜನ
ಧಾರವಾಡ prajakiran.com : ಕಳೆದ ಕೆಲವು ದಿನಗಳ ಹಿಂದೆ ಕವಲಗೇರಿ, ಗೋವನಕೊಪ್ಪ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಜನರಲ್ಲಿ ಸಾಕಷ್ಟು ಅತಂಕ ಹುಟ್ಟುಹಾಕಿದ್ದ ಚಿರತೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಇಷ್ಟು ದಿನ ಪ್ರಾಣಭಯದಲ್ಲಿ ಜೀವನ ನಡೆಸುತ್ತಿದ್ದ ಜನರು ಸದ್ಯ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ.
ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು , ಪ್ರಾಣಭಯದಿಂದ ಹೊಲಕ್ಕೆ ಹೋಗುವುದನ್ನು ನಿಲ್ಲಿಸಿದ್ದ ರೈತರು ಇದೀಗ ತುಸು ಸಮಾಧಾನ ಗೊಂಡಿದ್ದಾರೆ.
ಕಳೆದ 5-6 ದಿನಗಳ ಹಿಂದೆ ರೈತರೊಬ್ಬರೂ ಕಬ್ಬಿನ ಗದ್ದೆಗೆ ತೆರಳಿದ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿತ್ತು.
ಅಂದಿನಿಂದ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಗಾಗಿ ಗದಗ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯಅರಣ್ಯ ಇಲಾಖೆ ಸಿಬ್ಬಂದಿ ಕರೆಸಿ ಸಾಕಷ್ಟು ಶೋಧ ಕಾರ್ಯ ನಡೆಸಿದ್ದರು.
ಭಾನುವಾರ ಬೆಳಿಗ್ಗೆ ಕೊನೆಗೂ ಚಿರತೆ ಸೆರೆಯಾಗಿದ್ದು, ಅದನ್ನು ಸ್ಥಳಾಂತರ ಮಾಡಲಾಯಿತು