ಧಾರವಾಡ prajakiran. com : ಖಾಸಗಿ ಬಸ್ ಮತ್ತು ಕಾರು ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ ಘಟನೆ ಸಮೀಪದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.
ಹರಿಯಾಣದ ಫರೀದಾಬಾದ್ ನಿವಾಸಿ ಕುಲದೀಪಸಿಂಗ್ ಗುರುದಯಾಳಸಿಂಗ್ (೪೯) ಎಂಬಾತನೇ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ಅಲ್ಟೋ ಕಾರು ಹಾಗೂ ಖಾಸಗಿ ಬಸ್ಗಳ ಮಧ್ಯೆ ಈ ಅಪಘಾತ ಸಂಬಂಧಿಸಿದ್ದು, ಕಾರು ಚಾಲಕ ಕುಲದೀಪಸಿಂಗ್ ಸ್ಥಳದಲ್ಲಿಯೇ ಅಸುನೀಗಿದ್ದಾನೆ.
ಅಪಘಾತ ಸಂಭವಿಸಿದ ಕೂಲಡೇ ಬಸ್ ಚಾಲಕ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದ ತಕ್ಷಣ ಗರಗ ಪೊಲೀಸ್ ಠಾಣೆಯ ಪಿ ಎಸ್ ಐ ಕಿರಣ ಮೋಹಿತೆ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ಗರಗ ಠಾಣೆಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.