ಜಿಲ್ಲೆ

ಧಾರವಾಡದ ವಿವಿಧ ಬಡಾವಣೆಗಳಲ್ಲಿ ಮೊಂಬತ್ತಿ ಪ್ರತಿಭಟನೆ

ಧಾರವಾಡ prajakiran.com : ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ  ನಡೆದ ೧೯ ವರ್ಷದ ಯುವತಿಯ ಅತ್ಯಾಚಾರ  ಖಂಡಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಧಾರವಾಡದ ವಿವಿಧ ಬಡಾವಣೆಯ ಜನರು ಮೊಂಬತ್ತಿ ಪ್ರತಿಭಟನೆ ನಡೆಸಿದರು.

 ಧಾರವಾಡದ ಯು.ಬಿ.ಹಿಲ್‌ನ ರಾಯದುರ್ಗ ಬಡಾವಣೆ, ಹೊಸಯಲ್ಲಾಪುರದ ಮಂಡ್ ಓಣಿ, ಸನ್ಮತಿ ರಸ್ತೆ, ಹಿರೆಮಠ್ ಚಾಳ ರಾಮನಗರ, ಸೈದಾಪುರ, ನಾಯಕನ ಹುಲಕಟ್ಟಿ ಗ್ರಾಮ ಸೇರಿದಂತೆ ಹಲವೆಡೆ ಮೋಂಬತ್ತಿ ಪ್ರತಿಭಟನೆ ನಡೆಯಿತು.

ಈ ವೇಳೆ ಉತ್ತರ ಪ್ರದೇಶದ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆ ಅಪರಾಧಿಗಳನ್ನು ಶಿಕ್ಷಿಸುವ ಬದಲಾಗಿ, ಅವರನ್ನು ಪಾರು ಮಾಡಲು ಹುನ್ನಾರ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟೀಕಿಸಿದರು.

ಇಂತಹ ಅಪರಾಧಗಳಿಗೆ ಪ್ರಚೋದನೆ ನೀಡುವ ಅಶ್ಲೀಲ ಸಿನೆಮಾ-ಸಾಹಿತ್ಯ, ಮದ್ಯಪಾನವನ್ನು ನಿಷೇಧಿಸ ಬೇಕೆಂದು ಹಾಗೂ ಆದಷ್ಟು ಬೇಗ ಈ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಅಪರಾಧ ಎಸಗಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಯಿತು.

ಪ್ರತಿಭಟನೆಯಲ್ಲಿ ಸಂಘಟನಕಾರರಾದ ಮಧುಲತಾ ಗೌಡರ್, ವಿಜಯಲಕ್ಷ್ಮಿ ದೇವತ್ಕಲ್, ಗಂಗಾ ಕೊಕರೆ, ದೇವಮ್ಮ, ಪ್ರೀತಿ, ಸಹನಾ ಆಚಾರ್ಯ, ಅನಿತಾ, ರತ್ನಾ ರಾಯದುರ್ಗ, ಶಶಿಕಲಾ, ವಿನುತಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *