ಧಾರವಾಡ prajakiran.com : ಕೇಂದ್ರದ ಮಾಜಿ ಗೃಹ ಸಚಿವ ಹಾಗೂ ಉಕ್ವಕಿನ ಮನುಷ್ಯ ಖ್ಯಾತಿಯ ಸರದಾರ ವಲ್ಲಭ ಭಾಯಿ ಪಟೇಲ ಅವರ ಜನ್ನದಿನದ ನಿಮಿತ್ಯ ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಸ್.ಪಿ. ಪಿ.ಕೃಷ್ಣಕಾಂತ ಮಾರ್ಗದರ್ಶನದಲ್ಲಿ ಶನಿವಾರ ಮಧ್ಯಾಹ್ನ ನರೆಂದ್ರ ಗ್ರಾಮದಲ್ಲಿ ರಾಷ್ಟ್ರೀಯ ಏಕತಾ ಓಟ ಏರ್ಪಡಿಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು.
ಧಾರವಾಡ ಗ್ರಾಮೀಣ ಸಿಪಿಐ ಎಸ್.ಸಿ.ಪಾಟೀಲ ಮತ್ತು ಗರಗ ಸಿಪಿಐ ಪ್ರಸಾದ ಪಣೇಕರ ನೇತೃತ್ವದಲ್ಲಿ ಪಿಎಸ್ಐ ಮಹೇಂದ್ರಕುಮಾರ ನಾಯಕ್ ಹಾಗೂ ಕಿರಣ ಮೊಹಿತೆ ಅವರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪೊಲೀಸ್ ಸಿಬ್ಬಂದಿಗಳೊಂದಿಗೆ ಏಕತಾ ಓಟದ ಮೆರವಣಿಗೆ ಮೂಲಕ ಸಂಚರಿಸಿ, ಸಾರ್ವಜನಿಕರೊಂದಿಗೆ ಏಕತಾದಿನದ ಪ್ರತಿಜ್ಞಾವಿದಿ ಸ್ವೀಕರಿಸಿದರು.
ಏಕತಾದಿನದ ಅಂಗವಾಗಿ ಸಮಾಜದಲ್ಲಿ ಏಕತೆ, ಭಾವೈಕ್ಯತೆ , ಸಾಮರಸ್ಯ ಕಾಪಾಡುವ ಕುರಿತು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರು.