ನವದೆಹಲಿ Prajakiran.com : ರಾಜ್ಯದ ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ಮತದಾನದ ಮೇಲೆ ರಾಜ್ಯದ ನಾಲ್ಕು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ರಾಜ್ಯದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತ ಎಣಿಕೆಯ ದಿನಾಂಕವನ್ನು ಮುಂದೂಡಿ ಆದೇಶ ಹೊರಡಿಸಿದೆ.
ಇದರಿಂದಾಗಿ ಈ ಹಿಂದೆ ನವೆಂಬರ್ 2ರಂದು ನಡೆಯಬೇಕಿದ್ದ ಮತ ಎಣಿಕೆಯನ್ನು ಇದೀಗ
ನ. 10ಕ್ಕೆ ಮುಂದೂಡಿದಂತಾಗಿದೆ.
ಇದರಿಂದಾಗಿ ರಾಜ್ಯದಲ್ಲಿ ಅ.28ರಂದು ನಡೆದ ನಾಲ್ಕು ವಿಧಾನಪರಿಷತ್ ಮತಕ್ಷೇತ್ರಗಳ ಮತದಾನದ ಮತ ಎಣಿಕೆ ಪ್ರಕ್ರಿಯೆ ಈಗ ನವೆಂಬರ್ 2ರ ಬದಲಾಗಿ, ನವೆಂಬರ್ 10ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಇದು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರಿಗೆ ಅದರಲ್ಲೂ ವಿಶೇಷವಾಗಿ ಅಖಾಡಕ್ಕೆ ಇಳಿದಿದ್ದ ಅಭ್ಯರ್ಥಿಗಳು ಮತ್ತೆ ಎಂಟು ದಿನಗಳ ಕಾಲ ಮತ ಎಣಿಕೆಗೆ ಕಾಯಬೇಕಾಗಿದೆ.
ಮೊದಲೇ ಡವ ಡವ ಎನ್ನುತ್ತಿದ್ದ ಎದೆ ಬಡಿತ ಮತ್ತಷ್ಟು ಎರಳಿತವಾಗಲಿದೆ.