ಧಾರವಾಡ Prajakiran.com : ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕೂಟ ಹಮ್ಮಿಕೊಂಡ ಪ್ರತಿಭಟನೆ ಶನಿವಾರವೂ ಮುಂದುವರೆದಿದೆ.
ಇದರಿಂದಾಗಿ ಬಸ್ ನಿಲ್ದಾಣ ಗಳು ಬಿಕೋ ಎನ್ನುತ್ತಿವೆ. ಪ್ರಯಾಣಿಕರು ಹಾಗೂ ಸಾರಿಗೆ ನೌಕರರು ರಾಜ್ಯದ ಬಿಜೆಪಿ ಸರಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಬೇಡಿಕೆ ಈಡೇರಿಸುವ ವರೆಗೆ ಹೋರಾಟ ಮುಂದುವರೆಯಲಿದೆ ಎಂದು ನೌಕರರ ಕೂಟದ ಗೌರವ ಅಧ್ಯಕ್ಷ ಪು.ಎಚ್. ನೀರಲಕೇರಿ ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಪ.ಪಂಗಡ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳಿಕೆ ನೀಡಿದ ಎಸ್ಸಿ ಎಸ್ಪಿ ನೌಕರರ ಸಂಘದ ಅಧ್ಯಕ್ಷ ಎಫ್. ಎಚ್ ಜಕ್ಕಪ್ಪನವರ ಹೇಳಿಕೆಗೆ ಎಸ್ಸಿ, ಎಸ್ಟಿ ಮುಖಂಡ ಹಾಗೂ ಸಾರಿಗೆ ನಿಯಂತ್ರಕ ವಿ.ಕೆ ವಾಲ್ಮೀಕಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರವನ್ನು ಜಾತಿ ಭೇದ ಭಾವ ಇಲ್ಲದೇ ಮಾಡ್ತಾ ಇರೋವಾಗ ಇವರು ಈ ರೀತಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ.
ಅವರ ಮಾತಿಗೆ ಸಾರಿಗೆ ನೌಕರರು ಕಿವಿಗೊಡದೆ ಹೊರಾಟ ಮುಂದುವರೆಸಬೇಕು ಎಂದು ವಾಲ್ಮೀಕಿ ಮನವಿ ಮಾಡಿದರು.
ಸಾರಿಗೆ ನೌಕರರ ಸಂಘದಲ್ಲಿ ಎಸ್ ಸಿ, ಎಸ್ಟಿ ಎಂಬ ಯಾವ ಭೇದ ಭಾವವಿಲ್ಲದೆ ಹೋರಾಟ ಹಮ್ಮಿಕೊಳ್ಳಲಾಗಿದೆ.
ಒಟ್ಟಾರೆ ರಾಜ್ಯದ ಎಲ್ಲ ನೌಕರರು ಮುಷ್ಕರದಲ್ಲಿ ಒಟ್ಟಾಗಿ ಭಾಗವಹಿಸಿ ಹೋರಾಡುತ್ತಿದ್ದಾರೆ.
ನಮ್ಮ ಹೋರಾಟವನ್ನು ಹತ್ತಿಕ್ಕಲು ಈ ರೀತಿ ರಾಜಕೀಯ ಷ್ಯಡ್ಯಂತ್ರ ರೂಪಿಸಿ ಬೇರೆ ಬೇರೆ ನಾಯಕರುಗಳಿಂದ ಹೇಳಿಕೆ ನೀಡಿಸುತ್ತಿರುವುದು ಸರಿಯಲ್ಲ ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.