ರಾಜ್ಯ

ಧಾರವಾಡದ ಸಲಕಿನಕೊಪ್ಪ ದಾಬಾದಲ್ಲಿ ತಲವಾರ್‌ ನಿಂದ ಕೇಕ್ ಕತ್ತರಿಸಿ ಪೋಸ್ ಕೊಟ್ಟ ಯುವಕ….!

ಧಾರವಾಡ prajakiran.com : ಜನುಮದಿನದ ಸಂಭ್ರಮದಲ್ಲಿ ಯುವಕನೊಬ್ಬ
ತಲವಾರ್‌ ನಿಂದ ಕೇಕ್ ಕತ್ತರಿಸಿ ಪೋಸ್ ಕೊಟ್ಟ ಘಟನೆ ಧಾರವಾಡದ
ಸಲಕಿನಕೊಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಪ್ರವೀಣ ಸಂದೀಮನಿ ಎಂಬ ಯುವಕನೇ ಇಂತಹ ಯಡವಟ್ಟು ಮಾಡಿಕೊಂಡಿದ್ದಾನೆ.

ಕೇಕನ್ನು ತಲವಾರ್‌ನಿಂದ ಕತ್ತರಿಸಿ ಇದೀಗ ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಈತ ಸಲಕಿನಕೊಪ್ಪದ ಸಾಯಿ ದಾಬಾ ಮಾಲೀಕನ ತಮ್ಮ ಪ್ರವೀಣ ಸಂದೀಮನಿ ಎಂದು ಹೇಳಲಾಗಿದೆ.

ಸಲಕಿನಕೊಪ್ಪ ಗ್ರಾಮದ ಹದ್ದಿನಲ್ಲಿರುವ ಈ ದಾಬಾದಲ್ಲಿ ಈ ಆಚರಣೆ ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದೆ.

ಅಚ್ಚರಿಯ ಸಂಗತಿಯೆಂದರೆ
ಈ ವಿಡಿಯೋ ವನ್ನು ಆತನೇ ತನ್ನ ಗೆಳೆಯರಿಗೆ ಕಳುಹಿಸಿ ವೈರಲ್ ಮಾಡಿದ್ದಾನೆ ಎಂದು ಗೊತ್ತಾಗಿದೆ. 

ತಲವಾರ್‌ ಸಂಸ್ಕೃತಿ ಸಲಕಿನಕೊಪ್ಪದ ಗ್ರಾಮದವರೆಗೂ ಬಂದಿರುವುದು ವಿದ್ಯಾನಗರಿ ಧಾರವಾಡ ಜನತೆಗೆ ಆತಂಕ ಮಾಡಿದೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *