ಧಾರವಾಡ prajakiran.com : ಜನುಮದಿನದ ಸಂಭ್ರಮದಲ್ಲಿ ಯುವಕನೊಬ್ಬ
ತಲವಾರ್ ನಿಂದ ಕೇಕ್ ಕತ್ತರಿಸಿ ಪೋಸ್ ಕೊಟ್ಟ ಘಟನೆ ಧಾರವಾಡದ
ಸಲಕಿನಕೊಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಪ್ರವೀಣ ಸಂದೀಮನಿ ಎಂಬ ಯುವಕನೇ ಇಂತಹ ಯಡವಟ್ಟು ಮಾಡಿಕೊಂಡಿದ್ದಾನೆ.
ಕೇಕನ್ನು ತಲವಾರ್ನಿಂದ ಕತ್ತರಿಸಿ ಇದೀಗ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.
ಈತ ಸಲಕಿನಕೊಪ್ಪದ ಸಾಯಿ ದಾಬಾ ಮಾಲೀಕನ ತಮ್ಮ ಪ್ರವೀಣ ಸಂದೀಮನಿ ಎಂದು ಹೇಳಲಾಗಿದೆ.
ಸಲಕಿನಕೊಪ್ಪ ಗ್ರಾಮದ ಹದ್ದಿನಲ್ಲಿರುವ ಈ ದಾಬಾದಲ್ಲಿ ಈ ಆಚರಣೆ ನಿನ್ನೆ ರಾತ್ರಿ ನಡೆದಿದೆ ಎನ್ನಲಾಗಿದೆ.
ಅಚ್ಚರಿಯ ಸಂಗತಿಯೆಂದರೆ
ಈ ವಿಡಿಯೋ ವನ್ನು ಆತನೇ ತನ್ನ ಗೆಳೆಯರಿಗೆ ಕಳುಹಿಸಿ ವೈರಲ್ ಮಾಡಿದ್ದಾನೆ ಎಂದು ಗೊತ್ತಾಗಿದೆ.
ತಲವಾರ್ ಸಂಸ್ಕೃತಿ ಸಲಕಿನಕೊಪ್ಪದ ಗ್ರಾಮದವರೆಗೂ ಬಂದಿರುವುದು ವಿದ್ಯಾನಗರಿ ಧಾರವಾಡ ಜನತೆಗೆ ಆತಂಕ ಮಾಡಿದೆ.
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಯಾವ ಕ್ರಮ ಜರುಗಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.