ಧಾರವಾಡ prajakiran.com :
ತಲವಾರ್ ನಿಂದ ಕೇಕ್ ಕತ್ತರಿಸಿ ಪೋಸ್ ಕೊಟ್ಟ ಯುವಕ ಕೊನೆಗೂ ನಿರೀಕ್ಷೆಯಂತೆ ಧಾರವಾಡ ಗ್ರಾಮೀಣ ಪೊಲೀಸರ ಅತಿಥಿಯಾಗಿದ್ದಾನೆ.
ಆತನನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿ, ಸರಿಯಾಗಿ ಬಿಸಿ ತಾಕಿಸಿದ್ದಾರೆ.
ಧಾರವಾಡದ ಸಲಕಿನಕೊಪ್ಪದ ಸಾಯಿ ದಾಬಾದಲ್ಲಿ ಪ್ರವೀಣ ಸಂದೀಮನಿ ಎಂಬ ಯುವಕನೇ ತಲ್ವಾರ್ ನಿಂದ ಕೇಕ್ ಕಟ್ ಮಾಡಿದ್ದ.
ಅಲ್ಲದೆ, ಆ ಯುವಕನೇ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ.
ಹೀಗಾಗಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾನೆ.
ಸಲಕಿನಕೊಪ್ಪ ಗ್ರಾಮದ ಹದ್ದಿನಲ್ಲಿರುವ ಸಾಯಿ ದಾಬಾದಲ್ಲಿ ಈ ಆಚರಣೆ ನಡೆದಿತ್ತು.
ಹೀಗಾಗಿ ಗ್ರಾಮದ ಹಲವರ ಕರೆದು ಮಾಹಿತಿ ಸಂಗ್ರಹಿಸಿದ ಪೊಲೀಸರು ತನಿಖೆ ನಡೆಸಿ
ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.