ವಿದ್ಯಾರ್ಥಿ ಬಸ್ ಪಾಸ್ ಅವಧಿ ಅಂತ್ಯ ಹಿನ್ನೆಲೆ : ಜುಲೈ ಮೂರರ ವರೆಗೆ ಅವಧಿ ವಿಸ್ತರಣೆ
ಧಾರವಾಡ prajakiran.com :
ವಿದ್ಯಾರ್ಥಿ ಬಸ್ ಪಾಸ್ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ
ಪಾಸ್ ಪಡೆಯಲು ಗುರುವಾರ
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ನೂಕುನುಗ್ಗಲು ಉಂಟಯಿತು.
ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳು ಪಾಸ್ ಗಾಗಿ ಮುಗಿ ಬಿದ್ದಿದ್ದರು.
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಿಂದ ಬಂದಿರೋ ವಿದ್ಯಾರ್ಥಿಗಳು ತಾ ಮುಂದು ನೀ ಮುಂದು ಎಂದು ಪರದಾಡಿದರು.
20 ಕೌಂಟರ್ ತೆರೆದರೂ ದಟ್ಟಣೆ ಕಡಿಮೆಯಾಗದ ಪರಿಣಾಮ
ವಿದ್ಯಾರ್ಥಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ ನಡೆಸಬೇಕಾಯಿತು.
ಕೊನೆಗೆ ಮೂರು ದಿನ ಪಾಸ್ ಅವಧಿ ವಿಸ್ತರಣೆ ಮಾಡಲಾಯಿತು.
ಜುಲೈ 3ರ ವರೆಗೆ ಅವಧಿ ವಿಸ್ತರಿಸಿದರೂ ನೂಕುನುಗ್ಗಲು ಕಡಿಮೆಯಾಗಲಿಲ್ಲ.
ಸರದಿ ಸಾಲು ಬಿಟ್ಟು ಸರಿಯದ ವಿದ್ಯಾರ್ಥಿಗಳು ಹೆಣಗಾಟ ನೋಡಿ ಪೋಷಕರು ಹಾಗೂ ಸ್ಥಳೀಯ ಜನತೆ ಮರುಕಪಟ್ಟರು.