ಧಾರವಾಡ prajakiran.com : ಜಮೀನಿನಲ್ಲಿ ಪಾಲು ನೀಡದ ಹಿನ್ನಲೆಯಲ್ಲಿ ಅಣ್ಣನನ್ನೇ ಇಬ್ಬರು ತಮ್ಮಂದಿರು ಸೇರಿ ಕೊಂದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಅಳ್ನಾವರ ತಾಲೂಕಿನ ಪ್ರಭುನಗರ ಹೊನ್ನಾಪುರದಲ್ಲಿ ಈ ಕೊಲೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಕಳೆದ ಎಳೆಂಟು ವರ್ಷಗಳಿಂದ ಜಮೀನಿನಲ್ಲಿ ಪಾಲು ನೀಡುವಂತೆ ದುಂಬಾಲು ಬಿದ್ದಿದ್ದರು. ಆದರೆ ಅದನ್ನು ನಿರಾಕರಿಸುತ್ತಲೇ ಬಂದಿದ್ದ.
ಈ ಹಿನ್ನಲೆಯಲ್ಲಿ ರೊಚ್ಚಿಗೆದ್ದ ತಮ್ಮಂದಿರು ಅಣ್ಣ ಜಮೀನಿನಲ್ಲಿ ಕೆಲಸ ಮಾಡುವ ಸಮಯದಲ್ಲಿ ಜಗಳ ತೆಗೆದು ಆನಂತರ ಬಡಿಗೆ ಹಾಗೂ ಕುಡಗೋಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ.
ಕೊಲೆಯಾದ ವ್ಯಕ್ತಿಯನ್ನುಅಣ್ಣ ಕೆಂಪಣ್ಣಾ ಗುಡದಿ (65) ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ತಮ್ಮಂದಿರಾದ ಶಂಕರ ಗುಡದಿ ಹಾಗೂ ರುದ್ರಪ್ಪಾ ಗುಡದಿ ಎಂದು ತಿಳಿದುಬಂದಿದೆ.
ಈ ಕುರಿತು ಅಳ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.