ಕೊಡಗು prajakiran.com : ಎದೆನೋವು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿ ಮೃತಪಟ್ಟಿದ್ದಾರೆ.
ವೈದ್ಯರು ಇದು ಹೃದಯಘಾತದಿಂದ ಸಂಭವಿಸಿರುವ ಸಾವು ಎಂದು ದೃಡಪಡಿಸಿದ್ದಾರೆ.
ಹೀಗಾಗಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಿದ್ದಾರೆ. ಆದರೂ ಜವಾಬ್ದಾರಿಯುತ ಕುಟುಂಬ ಇರಲಿ ಎಂದು ಸ್ವಾಬ್ ಟೆಸ್ಟ್ ಮಾಡಿಸಿದ ಬಳಿಕ ತಮ್ಮ ಊರಿನಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನ್ವಯ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನಡೆಸಿದ್ದಾರೆ.
ಇದಲ್ಲಾ ನಡೆದು ಐದು ದಿನಗಳ ಬಳಿಕ ಮೃತ ವ್ಯಕ್ತಿಯ ವರದಿ ಪಾಸಿಟಿವ್ ಎಂದು ಬಂದಿದ್ದು,ಇದರಿಂದಾಗಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದವರು ಕಂಗಾಲಾಗಿದ್ದಾರೆ.
ಅಲ್ಲದೆ, ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಕುಟುಂಬಸ್ಥರು,ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದರಿಂದಾಗಿ ಈಗ ಇಡೀ ಗ್ರಾಮ ಸೀಲ್ ಡೌನ್ ಆಗಿದೆ.
ಪ್ರಕರಣದ ವಿವರ :
ದಕ್ಷಿಣ ಕೊಡಗಿನ ಹೈಸೊಡ್ಲೂರು ಗ್ರಾಮದ ನಿವಾಸಿ 58 ವರ್ಷದ ವ್ಯಕ್ತಿಗೆ ಮನೆಯಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದಕೊಂಡು ಹೋಗಲಾಗಿತ್ತು.
ಆಸಿಡಿಟಿ ಕಂಡು ಬಂದ ಹಿನ್ನಲೆಯಲ್ಲಿ ಎದೆನೋವು ಎಂದು ಮಾತ್ರೆಗಳನ್ನು ನೀಡಲಾಗಿತ್ತು. ಕೂಲಿ ಕೆಲಸ ಮಾಡಿಕೊಂಡಿದ್ದ ಊರಿನಲ್ಲಿ ಓಡಾಡಿದ್ದಾರೆ.
ವ್ಯಕ್ತಿ ಮತ್ತೇ ಎರಡನೇ ದಿನ ಎದೆ ನೋವಿನಿಂದ ತೋಟದಲ್ಲಿ ತಲೆ ತಿರುಗಿ ಬಿದ್ದಿದ್ದ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿ ಅಲ್ಲಿನ ವೈದ್ಯರು ಇಸಿಜಿ ನಡೆಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿರಾಜಪೇಟೆಗೆ ಕಳುಹಿಸಿದ್ದರು.
ಮರುದಿನ ಮೃತಪಟ್ಟಿದ್ದಾರೆ. ಮೂರು ಆಸ್ಪತ್ರೆ ಸುತ್ತಿದ ಬಳಿಕ ವೈದ್ಯರು ಇದು ಹೃದಯಘಾತದಿಂದ ಮೃತಪಟ್ಟಿರುವುದಾಗಿ ಹೇಳಿ ಧೃಡೀಕರಣ ಪತ್ರವನ್ನೂ ನೀಡಿದ್ದರು.
ಇದೀಗ ಅವರ ವರದಿ ಪಾಸಿಟಿವ್ ಬಂದಿರುವುದು ಎಲ್ಲರಿಗೂ ಕರೋನಾ ಮಹಾಮಾರಿ ಭಾರೀ ಕಳವಳ ಸೃಷ್ಟಿಸಿದೆ