ಮಂಜುನಾಥ ಕವಳಿ
ಧಾರವಾಡ prajakiran.com : ಕರೊನಾ ಹಾವಳಿಯಿಂದಾಗಿ ರಕ್ತ ಭಂಡಾರಗಳಲ್ಲಿ ರಕ್ತ ಸಿಗೋದೆ ಅಪರೂಪವಾಗಿದೆ.
ಇಂತಹ ಸಮಯದಲ್ಲಿ ಧಾರವಾಡದ ಚಂದ್ರಶೇಖರ್ ರಾಯರ ಅವರು ರಕ್ತದಾನ ಮಾಡಿದ್ದಾರೆ. ಆ ಮೂಲಕ ಈವರೆಗೆ ಬರೋಬ್ಬರಿ 100 ಸಾರಿ ರಕ್ತದಾನ ಮಾಡಿ ಸೆಂಚುರಿ ಮ್ಯಾನ್ ಆಗಿದ್ದಾರೆ.
ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲೋನಿ ನಿವಾಸಿಯಾಗಿರುವ ಚಂದ್ರಶೇಖರ ರಾಯರ್ ೫೪ ವರ್ಷ ವಯಸ್ಸಿನವರು.
ಬೇಲೂರು ಕೈಗಾರಿಕೆ ಪ್ರದೇಶದಲ್ಲಿ ಸಣ್ಣ ಕೈಗಾರಿಕೆ ನಡೆಸಿಕೊಂಡು ಹೋಗುತ್ತಿರುವ ಇವರು ಇಲ್ಲಿಯವರೆಗೂ ಸುಮಾರು 100 ಬಾರಿ ರಕ್ತದಾನ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಚಂದ್ರಶೇಖರ್ ಪ್ರತಿ ವರ್ಷನೂ 4 ಸಾರಿ ರಕ್ತದಾನ ಮಾಡುವ ಮೂಲಕ ಒಟ್ಟು ಈವರೆಗೆ 100 ಬಾರಿ ರಕ್ತದಾನ ಮಾಡಿದ್ದಾರೆ.
ರಕ್ತದಾನ ಮಾಡುವುದರಿಂದ ಆರೋಗ್ಯ ವಾಗಿಯೇ ಇದ್ದೇನೆ. ಯಾವುದೇ ರೀತಿಯಲ್ಲಿ ಆರೋಗ್ಯದ ಸಮಸ್ಯೆ ಇಲ್ಲ.
ಕರೊನಾ ಸಮಯದಲ್ಲಿ ರಕ್ತ ಭಂಡಾರ ಗಳಲ್ಲಿ ರಕ್ತದ ಕೊರತೆ ಇದ್ದು, ಅದನ್ನು ಸರಿದೂಗಿಸಲು ರಕ್ತದಾನಿಗಳು ಮುಂದೆ ಬರಬೇಕು ಅಂತಾರೆ ಚಂದ್ರಶೇಖರ.
ಚಂದ್ರಶೇಖರ ಅವರ ರಕ್ತದಾನ ಮಾಡುವ ಕಾರ್ಯ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದೆ. ಇತರರ ಜೀವ ಉಳಿಸುವ ಅವರ ಈ ಕಾರ್ಯಕ್ಕೆ ನಮ್ಮದೊಂದು ನಮನ