ಹುಬ್ಬಳ್ಳಿ prajakiran.com : ಭೂತಾನ ದೇಶದ ಪ್ರಜೆಯೊಬ್ಬರು ನಗರದ ಶಹರ ಬಜಾರ್ ನಲ್ಲಿ ಕಳೆದುಕೊಂಡ ಬ್ಯಾಗ್ ಹಾಗೂ ಹಣವನ್ನು ಹಿಂತಿರುಗಿಸಿ ಮುಸ್ಲಿಂ ಯುವಕರು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಹೌದು ಇಂದು ಮುಂಜಾನೆ ಮಾರುಕಟ್ಟೆಗೆ ಬಂದಿದ್ದು ಬೂತಾನ್ ದೇಶದ ಪ್ರಜೆ ಮೂರು ಲಕ್ಷ ಹಾಗೂ ಡಾಕ್ಯುಮೆಂಟ್ ಇದ್ದ ಬ್ಯಾಗ್ ಕಳೆದುಕೊಂಡ ಪರದಾಡುತ್ತಿದ್ದರು.
ಇನ್ನೂ ಫಾರೂಕ್ ಶಿರಹಟ್ಟಿ, ಜಾವೇದ ಎಂಬ ಯುವಕರಿಗೆ ಈ ಬ್ಯಾಗ್ ಸಿಕ್ಕಿತ್ತು
ಬ್ಯಾಗ್ ಮಾಲೀಕರನ್ನು ಹುಡುಕಲು ಮುಂದಾದಾಗ ಬೂತಾನ್ ಪ್ರಜೆ ಬ್ಯಾಗ್ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಬ್ಯಾಗ್ ಮರಳಿ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ನಂತರ ಮಾತನಾಡಿದ ಭೂತಾನ ಪ್ರಜೆ, ಮುಸ್ಲಿಂ ಯುವಕರ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಮುಂಡಗೋಡನಲ್ಲಿರುವ ಕ್ಯಾಂಪ್ ಗೆ ಹೋಗಿ ನಿಮ್ಮ ಬಗ್ಗೆ ವಿವರಣೆ ನೀಡಿ ಸತ್ಕಾರ ಮಾಡುತ್ತೇ ಎಂದಿದ್ದಾರೆ.