*ಸೂರ್ಯನತ್ತ ರಾಕೆಟ್ ಉಡಾವಣೆ: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರ*
*ಬಾಹ್ಯಾಕಾಶದಲ್ಲೂ ವಿಶ್ವನಾಯಕನಾಗುವತ್ತ ಭಾರತ*
ಬೆಂಗಳೂರು ಪ್ರಜಾಕಿರಣ.ಕಾಮ್ ಸೂರ್ಯನ ಕುರಿತು ಅಧ್ಯಯನ ನಡೆಸಲು ಇಸ್ರೋ ವಿಜ್ಞಾನಿಗಳು ಆದಿತ್ಯ ಎಲ್ 1 ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ.
ಆಂಧ್ರಪ್ರದೇಶದ
ಶ್ರೀಹರಿ ಕೋಟಾದಿಂದ ಈ ಉಪಗೃಹ ಉಡಾವಣೆ ಮಾಡಲಾಗಿದ್ದು,
ಇದಕ್ಕೆ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಚಂದ್ರಯಾನ 3 ಯಶಸ್ಸಿನ ನಂತರ ಇಸ್ರೊ ವಿಜ್ಞಾನಿಗಳ
ಈ ಐತಿಹಾಸಿಕ ಸಾಧನೆ ವಿಶ್ವಮಟ್ಟದಲ್ಲಿ ಮತ್ತಷ್ಟು ಸದ್ದು ಮಾಡುತ್ತಿದೆ.
ವಿಶ್ವನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ವಿಶ್ವ ನಾಯಕನಾಗುವತ್ತ ಸಾಗುತ್ತಿದ್ದು, ಅದಕ್ಕೆ ಪೂರಕವಾಗಿ ಬಾಹ್ಯಾಕಾಶದಲ್ಲಿಯೂ ಭಾರತ ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವ ಮೂಲಕ ವಿಶ್ವವನ್ನು ಭಾರತದೆಡೆಗೆ ನೋಡುವಂತೆ ಮಾಡಿದೆ.
ಆದಿತ್ಯ ಎಲ್ ಒನ್ ಸೂರ್ಯನ ಚಲನವಲನ ಅಧ್ಯಯನ ಮಾಡಿ ಛಾಯಾಚಿತ್ರಗಳನ್ನು ಕಳುಹಿಸಲಿದೆ.
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಅಭಿನಂದಿಸಿದ್ದಾರೆ.