ಧಾರವಾಡ prajakiran.com : ಲವ್ ಜಿಹಾದ್ , ಮತಾಂತರ ನಿಷೇಧ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಮಸೀದಿಗಳಲ್ಲಿ ಧ್ವನಿವರ್ಧಕ ನಿರ್ಬಂಧಿಸುವಂತೆ ಒತ್ತಾಯಿಸಿ ಧಾರವಾಡದಲ್ಲಿ ಹಿಂದು ಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಬೀದಿಗಿಳಿದರು.
ಶುಕ್ರವಾರ ಧಾರವಾಡ ಕಡಪಾ ಮೈದಾನದಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ರ್ಯಾಲಿ ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆಯಿತು.
ಈ ನಿಟ್ಟಿನಲ್ಲಿ
ರಾಜ್ಯ ಸರ್ಕಾರ ಕೂಡಲೇ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲು ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್, ಭಜರಂಗ ದಳ ಧಾರವಾಡ ಜಿಲ್ಲೆ ಹಾಗೂ ಶ್ರೀರಾಮಸೇನೆ, ಹಿಂದೂಪರ ಸಂಘಟನೆಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಆ ಬಳಿಕ ಧಾರವಾಡ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಧಾರವಾಡದ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿಜಯಾನಂದ ಸರಸ್ವತಿ ಸ್ವಾಮಿಜಿ, ಪರಮಾತ್ಮ ಆಶ್ರಮದ ಬ್ರಹ್ಮಶ್ರೀ ಪರಮಾತ್ಮಾ ಸ್ವಾಮೀಜಿ, ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ,
ವಿಶ್ವ ಹಿಂದು ಪರಿಷತ್ ಸಂಘಟನೆ ಧಾರವಾಡ ಜಿಲ್ಲೆಯ ಅಧ್ಯಕ್ಷ ಎಸ್.ಎಚ್ ಪಾಟೀಲ, ಪ್ರಧಾನ ಕಾರ್ಯದರ್ಶಿ ರವಿಕುಮಾರ ಪಟ್ಟಣಶೆಟ್ಟಿ, ಬಿಜೆಪಿಯ ಮುಖಂಡರಾದ ಸಂಗನಗೌಡ ರಾಮನಗೌಡರ, ಬಸವರಾಜ ಕೌಜಲಗಿ, ಸುನೀಲ ಮೊರೆ, ಮಹಾನಗರ ಪಾಲಿಕೆ ಸದಸ್ಯ ಶಂಕರ ಶೆಳಕೆ, ಮರಾಠ ಸಮಾಜದ ಮುಖಂಡ ರಾಜು ಅಂಬೋರೆ, ಸೇರಿದಂತೆ ಹಿಂದುಪರ ಸಂಘಟನೆಯ ನೂರಾರು ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.
ಕೇಸರಿ ಧ್ವಜಗಳ ಹಾರಾಟ ಹಾಗೂ ಭಜರಂಗಿ, ಜೈ ರಾಮ್ ಶ್ರೀ ರಾಮ್ ಘೋಷಣೆಗಳ ಅಬ್ಬರ ಜೋರಾಗಿತ್ತು.