ಬೆಳಗಾವಿ prajakiran.com : ರಾಜ್ಯದ ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ತಂದಿರುವ ಯಮಕನಮರಡಿ ಪೊಲೀಸ್ ಠಾಣೆ ಆವರಣದಲ್ಲಿನ ೪.೯ ಕೆ.ಜಿ ಚಿನ್ನ ಕಳ್ಳತನ ಪ್ರಕರಣದ ಕಿಂಗ್ಪಿನ್ ಕಿರಣ ವೀರನಗೌಡಗೆ ಬೆಳಗಾವಿಯ ೪ನೇ ಜೆಎಂಎಫ್ಸಿ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಯಮಕನಮರಡಿ ಠಾಣೆ ಬಳಿಯ ಕಾರ್ನ ಏರ್ಬ್ಯಾಗ್ನಲ್ಲಿ ಇದ್ದ ೪.೯ ಕೆ.ಜಿ ಕಳ್ಳತನ ಕಳುವು ಪ್ರಕರಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಶಾಮೀಲಾಗಿ ಎರ್ಟಿಗಾ ಕಾರ್ ಬಿಡಿಸಿಲು ಮಾಲೀಕ ತಿಲಕ್ ಪೂಜಾರಿಯಿಂದ ೨೫ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೂ ಆನಂತರ ಅದನ್ನು ಪಡೆದು ಮರಳಿಸಿದ್ದರು.
ಆದರೆ ಚಿನ್ನ ಮಾತ್ರ ವಾಪಾಸ್ ಕೊಟ್ಟಿರಲಿಲ್ಲ. ಹೀಗಾಗಿ ಆತ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡಲಾಗಿತ್ತು.
ಹಣ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳು ಯಮಕನಮರಡಿ ಠಾಣೆಯಲ್ಲಿ ಭಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿದ್ದರಲ್ಲದೇ ಕಿರಣ್ನನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.
ಇದಾದ ಬಳಿಕ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ನಕಲಿ ಪೊಲೀಸ್ ಗುರುತಿನ ಚೀಟಿ ಬಳಸಿದ್ದ ಆರೋಪದ ಕುರಿತು ದೂರು ದಾಖಲಾಗಿತ್ತು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು 10 ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ ಜಾಮೀನು ಕೋರಿ ಕಿರಣ ವೀರನಗೌಡರ ಪರ ವಕೀಲರು ಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ ಬೆಳಗಾವಿಯ ೪ನೇ ಜೆಎಂಎಫ್ಸಿ ವಿಶೇಷ ನ್ಯಾಯಾಲಯ ಒಂದು ಪ್ರಕರಣದಲ್ಲಿ ಜಾಮೀನು ನೀಡಿದೆ.
ಇನ್ನು ನಕಲಿ ಐಡಿ ಪ್ರಕರಣದಲ್ಲಿ ಮತ್ತೆ ೧೦ ದಿನಗಳ ಕಾಲ ವಿಚಾರಣೆ ಅವಧಿ ನಾಳೆಗೆ ಜು. 1ಕ್ಕೆ ಮುಗಿಯಲಿದೆ.
ಹೀಗಾಗಿ ನಾಳೆ ಬೆಳಗಾವಿ ಜಿಲ್ಲೆಯ ನ್ಯಾಯಾಲಯದ ಎದುರು ಹಾಜರು ಪಡಿಸಲಿದ್ದಾರೆ. ಸಿಐಡಿ ಮತ್ತೆ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಿದೆಯಾ ಅಥವಾ ಬೆಳಗಾವಿ ಜಿಲ್ಲೆಯ ಹಿಂಡಲಗಾ ಜೈಲಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದೆಯಾ ಎಂಬುದು ಕಾದು ನೋಡಬೇಕು