ಬೆಂಗಳೂರು prajakiran.com : ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಭೇಟಿಗೆ ಅವಕಾಶ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದ ಎದುರು ಅರ್ಜಿ ಸಲ್ಲಿಸಿದ್ದಾರೆ.
ಹೌದು ಇದು ಅಚ್ಚರಿಯಾದ್ರೂ ನಂಬಲೇಬೇಕಾದ ಕಟು ಸತ್ಯ.
ಡಿ.ಕೆ. ಶಿವಕುಮಾರ ಪರ ವಕೀಲ ಮಂಜುನಾಥ ಎಂ.ಆರ್. ಅವರು ಇಮೇಲ್ ಮೂಲಕ ಈ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ವಿಚಾರಣೆಗೆ ಅಂಗಿಕರಿಸಿರುವ ನ್ಯಾಯಾಲಯವು ಜೂನ್ ಮೂರರಂದು ಕೈಗೆತ್ತಿಕೊಳ್ಳಲಿದೆ.
ಉತ್ತರ ಕರ್ನಾಟಕ ಭಾಗದ ಜನತೆ ಹಾಗೂ ಅದರಲ್ಲೂ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರ ಚಿತ್ತ ಈ ಅರ್ಜಿಯ ವಿಚಾರಣೆಯತ್ತ ನೆಟ್ಟಿದೆ.
ಬೆಂಗಳೂರಿನ 82 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯ ಅನುಮತಿ ನೀಡುತ್ತಾ ಇಲ್ಲವೇ ಎಂಬುದನ್ನು ಜೂನ್ 3 ರಂದು ತಿಳಿಯಲಿದೆ.