ರಾಜ್ಯ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡಲು ಆಗ್ರಹ

ಹುಬ್ಬಳ್ಳಿ prajakiran.com : ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಕಳೆದ  ಹಲವಾರು ವರ್ಷಗಳಿಂದ ನಿಯಮಿತವಾಗಿ ನಡೆಯದೆ ಇರುವುದರಿಂದ 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ವರ್ಗಾವಣೆಯಿಂದ ವಂಚಿತರಾಗಿ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ.

ಆದ್ದರಿಂದ ಆದಷ್ಟು ಬೇಗ  ಆಕ್ಷೇಪಣೆಗಳ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಿ ನಿಯಮಗಳನ್ನು ಹೊರಡಿಸಿ ವರ್ಗಾವಣೆ ವೇಳಾ ಪಟ್ಟಿ ಪ್ರಕಟಿಸಬೇಕು ಎಂದು ಕರ್ನಾಟಕ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆಗ್ರಹಿಸಿದೆ.

ನಿಯಮಗಳಲ್ಲಿ ಈಗಾಗಲೇ ಸಲ್ಲಿಸಲಾಗಿರುವ ಶೇ.೨೫ ಮಿತಿ ಕೈ ಬಿಡುವುದು, ಪರಸ್ಪರ ವರ್ಗಾವಣೆ ಮೂರು ವರ್ಷ ಪರಿಗಣಿಸುವುದು.

ಸಾರ್ವಜನಿಕ ಉದ್ಯಮ, ನಿಗಮ ಮಂಡಳಿ, ಬ್ಯಾಂಕಿಂಗ್ ಕ್ಷೇತ್ರ ವಸತಿ ಶಿಕ್ಷಣ ಸಂಸ್ಥೆಯ ಪತಿ ಪತ್ನಿ ಪರಿಗಣಿಸುವುದು, ಶೇ.ಮಿತಿ ೮ ಕ್ಕೆ ಹೆಚ್ಚಿಸುವುದು  ಪಿ.ಎಸ್.ಟಿ.ಜಿ.ಪಿ.ಟಿ. ಹಿಂದಿ ಶಿಕ್ಷಕರ ಅಹವಾಲು ರೈತ ಮಹಿಳೆ, ರೈತ ಪುರುಷ ಇದ್ದಲ್ಲಿ ವಿಶೇಷ ಗಮನ.

ಸಿ.ಆರ್.ಪಿ., ಬಿ.ಆರ್.ಪಿ., ಇ.ಸಿ.ಓ ಗಳ ಅಹವಾಲು  ಒಂದೇ ಗ್ರಾಮ ಒಂದೇ ಶಾಲೆಯಲ್ಲಿ ೨೦*೨೫*೩೦ ವರ್ಷ ಸೇವೆ ಸಲ್ಲಿಸಿದ ಸೇವಾ ಹಿರಿತನ, ಸಂಘಗಳ ಪದಾಧಿಕಾರಿಗಳ ಆದ್ಯತೆ ಕೈ ಬಿಡುವುದು. 

ಇತರೆ ಮಹಿಳೆ, ಇತರೆ ಪುರುಷ ಪ್ರತ್ಯೇಕತೆ ಕೈ ಬಿಡುವ ಹಾಗೂ ವಲಯ ವರ್ಗಾವಣೆ ಹೆಚ್ಚುವರಿ ಪ್ರಕ್ರಿಯೆ ಅಥವಾ ಮರು ಹೊಂದಾಣಿಕೆ ಪ್ರಕ್ರಿಯೆ ಕುರಿತು ಸಲ್ಲಿಸಲಾಗಿರುವ ಆಕ್ಷೇಪಣೆಗಳ  ಸಲಹೆಗಳನ್ನು ಅಂಗೀಕರಿಸಿ ನಿಯಮಗಳನ್ನು ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಶಿಕ್ಷಣ ಸಚಿವರು ಹೇಳಿರುವಂತೆ ಶಿಕ್ಷಕ ಸ್ನೇಹಿ ವರ್ಗಾವಣೆ ಜೊತೆಗೆ ಸರ್ವಾನುಕೂಲ ವರ್ಗಾವಣೆ ವಿಳಂಬವಿಲ್ಲದೆ ಆರಂಭಿಸಬೇಕೇಂದು ಎಂದು  ಮುಖ್ಯಮಂತ್ರಿ, ಶಿಕ್ಷಣ  ಸಚಿವರಿಗೆ ರಾಜ್ಯಾಧ್ಯಕ್ಷ ಅಶೋಕ ಸಜ್ಜನ, ಪ್ರ.ಕಾ.ಮಲ್ಲಿಕಾರ್ಜುನ ಉಪ್ಪಿನ,  ಗೌರವಾಧ್ಯಕ್ಷ ಎಲ್ ಆಯ್ ಲಕ್ಕಮ್ಮನವರ, ಕಾರ್ಯಾಧ್ಯಕ್ಷ ಶರಣಪ್ಪಗೌಡ್ರ, ಕೋಶಾಧ್ಯಕ್ಷ ಎಸ್.ಎಫ್.ಪಾಟೀಲ ಉಪಾಧ್ಯಕ್ಷರಾದ ಮಹ್ಮದ ರಫಿ, ಹನುಮಂತಪ್ಪ ಮೇಟಿ ಒತ್ತಾಯಿಸಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *