ಬಾಗಲಕೋಟೆ prajakiran. com : ಬಾಗಲಕೋಟೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಲೋಕಾಪುರ ಕಾಂಗ್ರೆಸ್ ಯುವ ನಾಯಕ ಮಹಾಂತೇಶ ಬಸವರಾಜ ಉದಪುಡಿ (42) ಬುಧವಾರ ನಿಧನ ಹೊಂದಿದರು.
ಅವರು ಕಳೆದ ಹಲವು ದಿನಗಳಿಂದ ಕೋವಿಡ್ ವಿರುದ್ದ ಹೋರಾಡುತ್ತಿದ್ದರು.
ಆದರೆ ಅವರು ಬ್ಲಾಕ್ ಫಂಗಸ್ ಗೆ ತುತ್ತಾಗಿ ಬಾರದ ಲೋಕಕ್ಕೆ ಪಯಣ ಬೆಳೆಸಿದರು.
ಒಬ್ಬ ಪ್ರಗತಿಪರ ಉದ್ದಿಮೆದಾರ , ನಿಷ್ಟಾವಂತ ಕಾರ್ಯಕರ್ತ, ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ಶ್ರಮಿಸುತ್ತಿದ್ದ ಲೋಕಾಪುರದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಹಾಂತೇಶ ಉದಪುಡಿ ಅವರ ಆಕಸ್ಮಿಕ ನಿಧನ ಸುದ್ಧಿ ದಿಗ್ಭ್ರಮೆಯನ್ನು ಉಂಟು ಮಾಡಿದೆ.
ಇದರಿಂದಾಗಿ ಕಾಂಗ್ರೆಸ್ ಪಕ್ಷ ಒಬ್ಬ ಭವಿಷ್ಯದ ಭರವಸೆಯ ಯುವ ನಾಯಕನನ್ನು ಕಳೆದುಕೊಂಡತಾಗಿದೆ
ಎಂದು ಮಾಜಿ ಸಚಿವರಾದ ಎಸ್. ಆರ್ ಪಾಟೀಲ, ಆರ್ ಬಿ ತಿಮ್ಮಾಪುರ ಸೇರಿದಂತೆ ಕಾಂಗ್ರೆಸ್ ಮುಖಂಡರು ಕಂಬನಿ ಮಿಡಿದಿದ್ದಾರೆ.
ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗದವರಿಗೆ ನೋವನ್ನು ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.