- ಒಂದು ಚಮಚ ತುಳಸಿ ರಸ, ಒಂದು ಚಮಚ ಹಸಿ ಶುಂಠಿ ರಸ, ಎರಡು ಚಮಚ ಲಿಂಬೆ ರಸ ಸೇರಿಸಿ ಕುಡಿಯಬೇಕು.
- ಪಿತ್ತಪ್ರಕೋಪದ ಕಾರಣ ಶರೀರದಲ್ಲಿ ಪಿತ್ತದ ಗ್ರಂಥಿಗಳು ಎದ್ದಿದ್ದರೆ 10 ಗ್ರಾಮ ತುಳಸಿಯ ಬೀಜವನ್ನು ತುಳಸಿಯ ರಸದಲ್ಲಿ ಬೆರೆಸಿ ಸೇವಿಸುವುದು.
- ಎರಡು ಚಮಚ ಜೇನುತುಪ್ಪದಲ್ಲಿ ಎರಡು ಚಿಟಿಕೆ ಅಳಲೆಕಾಯಿ ಚೂರ್ಣವನ್ನು ಸೇರಿಸಿ ಸೇವಿಸುವುದು.
- ಒಂದು ಕಪ್ ಪಪ್ಪಾಯಿ ಹಣ್ಣಿನ ರಸದಲ್ಲಿ ಮೂಲಂಗಿಯ ರಸ ಸೇರಿಸಿ ಬೆಳಗ್ಗೆ ಹಾಗೂ ಸಾಯಂಕಾಲ ಸೇವಿಸುತ್ತಿದ್ದರೆ ಹುಳಿ ತೇಗು ನಿಲ್ಲುತ್ತದೆ. ಮತ್ತು ಪಿತ್ತ ವಿಕಾರ ದೂರವಾಗುತ್ತದೆ.
- ಪಿತ್ತ ಪ್ರಕೋಪದಿಂದ ಕಣ್ಣಿಂದ ಕತ್ತಲು ಕವಿಯುತ್ತಿದ್ದರೆ,ತೆಲೆ ಸುತ್ತು, ಮೊದಲಾದ ತೊಂದರೆಗಳಿದ್ದರೆ ಒಂದು ಕಪ್ ನೆಲ್ಲಿಕಾಯಿ ರಸದಲ್ಲಿ ಕಲ್ಲು ಸಕ್ಕರೆ ಸೇರಿಸಿ ಸೇವಿಸಬೇಕು.
- 5 ಗ್ರಾಂ ದಾಳಿಂಬೆ ಬೀಜಗಳ ಚೂರ್ಣ, ಎರಡು ಗ್ರಾಂ ಅರಸಿನ, ಎರಡು ಗ್ರಾಂ ಪಾದರ ಲವಣ ಈ ಮೂರನ್ನು ಮಿಶ್ರಣ ಮಾಡಿ ನೀರಿನೊಂದಿಗೆ ಸೇವಿಸುವುದು.
- ದಾಳಿಂಬೆ ಬೀಜಗಳ ರಸ ನಾಲ್ಕು ಚಮಚ, ಎಲೆ ಕೂಸಿನ ರಸ ನಾಲ್ಕು ಚಮಚ, ಗಜರಿ ರಸ ಒಂದು ಚಮಚ ಈ ಮೂರನ್ನು ಸೇವಿಸಿದರೆ ಆಮ್ಲ ಪಿತ್ತ ನಿಯಂತ್ರಣಕ್ಕೆ ಬರುತ್ತದೆ.
ಮಾಹಿತಿ : ಶಶಿಕಾಂತ ದೇವಾಡಿಗ, ನಾಟಿ ವೈದ್ಯರು.