ವರದಿ : ಪ್ರಶಾಂತ ಹೂಗಾರ
ಮೂಡಲಗಿ prajakiran.com : ತಾಲೂಕಿನ ಅರಬಾವಿ ಗ್ರಾಮದ ನಿವಾಸಿಯಾದ ಆನಂದ ಹುಚ್ಚಪ್ಪ ತಮ್ಮ ಜಮೀನಿಗೆ ವಿದ್ಯುತ್ ಲೀಡ್ ಹೆಚ್ಚಾಗಿ ಹಾಳಾಗುತ್ತಿರುವುದರಿಂದ ಹೊಸ ಟಿಸಿ ಹಾಕಿಕೊಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಇದಕ್ಕೆ ಅಧಿಕಾರಿಗಳಿಬ್ಬರು 65 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಅವರಿಬ್ಬರ ಲಂಚದ ದಾಹಕ್ಕೆ ಮನನೊಂದ ಅನ್ನದಾತ ಆನಂದ ಅವರು ಎಸಿಬಿ ಗೆ ದೂರು ನೀಡಿದ್ದರು.
ಹೆಸ್ಕಾಂ ಅಧಿಕಾರಿಗಳಿಬ್ಬರು 65 ಸಾವಿರ ಲಂಚ ಪಡೆಯತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಉತ್ತರ ವಲಯದ ಎಸಿಬಿ ಪೊಲೀಸ್ ಅಧೀಕ್ಷಕ ಬಿ. ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದ್ದು ಸದ್ಯ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.