ವರದಿ : ಪ್ರಶಾಂತ ಹೂಗಾರ
ಬೆಳಗಾವಿ prajakiran.com : ಲಂಚಕ್ಕೆ ಕೈಯ್ಯೊಡ್ಡಿದ ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆಯು ಪರಿವೀಕ್ಷಕ ಮೆಹಬೂಬ್ ಬಾಬಾಲಾಲ ಸಿಪಾಯಿ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಮೊಬೈಲ್ ಫೋನ್ ಗಳ ಹೊಸ ಅಂಗಡಿಗೆ ಜಿಎಸ್ ಟಿ ನಂಬರ ಮಂಜೂರು ಮಾಡಿ ಕೊಡಲು ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದ ಬೆಳಗಾವಿ ವಾಣಿಜ್ಯ ತೆರಿಗೆ ಇಲಾಖೆಯು ಪರಿವೀಕ್ಷಕ. ಭ್ರಷ್ಟಾಚಾರ ನಿಗ್ರಹದಳ ಬಲೆಗೆ ಬಿದ್ದಿದ್ದಾನೆ
ಮೆಹಬೂಬ್ ಬಾಬಾಲಾಲ ಸಿಪಾಯಿ ಬಂಧಿತ ಆರೋಪಿಯಾಗಿದ್ದು ತಾಲೂಕಿನ ಕಾಕತಿ ಮುಲ್ಲಾ ಎಂಬುವರು ಜಿಎಸ್ ಟಿ ನೊಂದಣಿಗೆ ಅರ್ಜಿ ಸಲ್ಲಿಸಿದ್ದು ಮಂಜುರಾತಿಗೆ 4 ಸಾವಿರ ಹಣ ಬೇಡಿಕೆ ಇಟ್ಟಿದ್ದರು.
ಕೊನೆಗೆ 2 ಸಾವಿರ ತೆಗೆದುಕೊಳ್ಳುವುದಾಗಿ ಒಪ್ಪಿದ್ದ ಕುರಿತು ಎಸಿಬಿ ಗೆ ದೂರು ನೀಡಿದ್ದರು.
ಶುಕ್ರವಾರ 2 ಸಾವಿರ ಲಂಚ ಪಡೆಯುತ್ತಿರುವಾಗ ರೆಡ್ ಹ್ಯಾಂಡ ಆಗಿ ಮೆಹಬೂಬ್ ನನ್ನು ಬಂಧಿಸಿ ನ್ಯಾಯಾಂಗಕ್ಕೆ ಒಳಪಡಿಸಿದ್ದು ತನಿಖೆ ಮುಂದುವರೆದಿದೆ.