ಕೊರೋನಾ ನಿರ್ವಹಣೆಗೆ ಮೊದಲ ಆದ್ಯತೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಬೆಂಗಳೂರು prajakiran.com : ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿ ಹರಿದಾಡಿದ್ದು, ಈ ಕುರಿತು ಸಿಎಂ ಯಡಿಯೂರಪ್ಪ ಮಾತನಾಡಿದ್ದಾರೆ.
ನನ್ನ ಮುಂದೆ ಈಗಿರುವುದು ಕೋವಿಡ್ ನಿರ್ವಹಣೆ ಮಾತ್ರ, ಅದಕ್ಕೇ ಮೊದಲ ಆದ್ಯತೆ ಎಂದಿದ್ದಾರೆ.
ಯಾರೋ ಎಲ್ಲಿಗೋ ಹೋಗಿ ಬಂದರೆ ನಾನೇನು ಮಾಡಲಿ? ಕಣ್ಣೆದುರು ಕೊರೋನಾ ಸಂದರ್ಭ ಎದುರಾಗಿದೆ. ಇದನ್ನು ನಿಭಾಯಿಸೋದಷ್ಟೇ ಮುಖ್ಯ ಎಂದಿದ್ದಾರೆ.