ಬೆಳಗಾವಿ prajakiran.com : ಬಸವರಾಜ ಬೊಮ್ಮಾಯಿ ಸರಕಾರದಲ್ಲಿ ಸಚಿವನಾಗುವ ಯಾವುದೇ ಆಸೆಯಿಲ್ಲ, ನಾನು ಮಂತ್ರಿ ಸ್ಥಾನಕ್ಕಿಂತ ಮೇಲಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ನನಗೆ ಸ್ಥಾನ ಸಿಗಲಿ, ಸಿಗದೇ ಇರಲಿ, ಆದರೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದ ಖುಷಿ ಇದೆ. ಇಲ್ಲವಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿ ಬಿಡುತ್ತಿತ್ತು. ಈಗ ಸಂತೋಷವಾಗಿದ್ದೇನೆ ಎಂದರು.
ಸಚಿವರಾಗಬೇಕು ಎಂಬ ಆಸೆ ಜಾರಕಿಹೊಳಿ ಕುಟುಂಬಕ್ಕೆ ಇಲ್ಲ. ಸರ್ಕಾರದಲ್ಲಿ ನಾವು ಸಚಿವರಾಗ್ತಿವೋ ಬಿಡ್ತಿವೋ ಆದರೆ ನಾನಿಗಲೂ ಮಂತ್ರಿಗಿಂತ ಹೆಚ್ಚಿದ್ದೇನೆ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ರಾಜೀನಾಮೆ ನಿರ್ಧಾರ ಮಾಡಿದ್ದು ನಿಜ.
ಆದರೆ ಸುತ್ತೂರು ಶ್ರೀಗಳು ಕೆಲ ಸಲಹೆ ಸೂಚನೆ ನೀಡಿದರು. ಹೀಗಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದರು.
ಕಾಂಗ್ರೆಸ್ ನವರು 20 ವರ್ಷ ನಡೆಸಿಕೊಂಡಷ್ಟು, ಬಿಜೆಪಿ ಹೈಕಮಾಂಡ್ 1 ವರ್ಷದಲ್ಲಿ ನಮ್ಮನ್ನು ನಡೆಸಿಕೊಂಡಿದೆ.
ಅವರ ಪ್ರೀತಿ ವಿಶ್ವಾಸಕ್ಕೆ ಬಿಜೆಪಿಯಲ್ಲಿ ಮುಂದುವರೆದಿದ್ದೇನೆ ಎಂದರು.
ಇದೇ ವೇಳೆ ಸಿಡಿ ಕೇಸ್ ಬಗ್ಗೆಯೂ ಮಾತನಾಡಿದ ರಮೇಶ್ ಜಾರಕಿಹೊಳಿ, ಪ್ರಕರಣವನ್ನು ಇನ್ನೂ ಒಂದು ವರ್ಷ ಬೇಕಾದರೂ ಹಾಗೇ ಇಟ್ಟಿರಲಿ.ನನಗೇನೂ ಅವಸರವಿಲ್ಲ ಎಂದು ಹೇಳಿದರು