ಹುಬ್ಬಳ್ಳಿ-ಧಾರವಾಡ prajakiran. com : ಹುಬ್ಬಳ್ಳಿ ಧಾರವಾಡ
ಮಹಾನಗರ ಪಾಲಿಕೆಯ ಕಸ ಸಂಗ್ರಹಿಸುವ 9 ಟಿಪ್ಪರ್ ವಾಹನಗಳ ಬ್ಯಾಟರಿಗಳ ಕಳ್ಳತನ ಪ್ರಕರಣ ಭೇದಿಸುವಲ್ಲಿ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಟಿಪ್ಪರ್ ಚಾಲಕ ಹನುಮಂತ ಕ್ಯಾರಕಟ್ಟಿಯೇ ಬಂಧಿತ ಆರೋಪಿ ಎಂಬುದು ಪೊಲೀಸ್ ತನಿಖೆಯಿಂದ ಬಯಲಿಗೆ ಬಂದಿದೆ.
ಈ ವಾಹನವನ್ನು ಸ್ಟಾರ್ಟ್ ಮಾಡಲು ಹೋದಾಗ ಬ್ಯಾಟರಿ ಕಳ್ಳತನ ಆಗಿರೋದು ಬೆಳಕಿಗೆ ಬಂದಿದೆ ಎಂದು ಸಬೂಬು ಹೇಳಿ ಯಾಮಾರಿಸಿದ್ದ.
ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಹತ್ತಿರುವ ಮಹಾನಗರ ಪಾಲಿಕೆಯ ವಲಯ ಕಛೇರಿ 11 ರ ಬಳಿ ಈ ವಾಹನಗಳನ್ನು ನಿಲ್ಲಿಸಲಾಗಿತ್ತು,
ಬೆಳಿಗ್ಗೆ ಬಂದು ನೋಡುವುದರೊಳಗಾಗಿ ಗಾಡಿಯಲ್ಲಿನ ಬ್ಯಾಟರಿಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪ್ರಕರಣದ ದಿಕ್ಕು ತಪ್ಪಿಸಿದ್ದ.
ಬ್ಯಾಟರಿ ಇಲ್ಲದ ಪರಿಣಾಮ 9 ಕಸ ಸಂಗ್ರಹಿಸುವ ವಾಹನಗಳು ಕಸ ಸಂಗ್ರಹಿಸುವ ಕಾರ್ಯಕ್ಕೆ ಹೋಗಿರಲಿಲ್ಲ.
ಹೀಗಾಗಿ ಅಧಿಕಾರಿಗಳು ಬ್ಯಾಟರಿಗಳ ಕಳವಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪೊಲೀಸರ ಮೊರೆ ಹೋಗಿದ್ದರು.
ಪಾಲಿಕೆ ವಾಹನ ಚಾಲನೆ ಮಾಡುತ್ತಿದ್ದ ಹನುಮಂತ ಕ್ಯಾರಕಟ್ಟಿಯೇ ಕಳ್ಳತನ ಮಾಡುತ್ತಿದ್ದ ಖದೀಮ ಎಂಬುದನ್ನು ಹುಬ್ಬಳ್ಳಿಯ ಕಸಬಾಪೇಟ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಅವರಿಗೆ ಪ್ರಕರಣ ಭೇದಿಸಲು ಅಲ್ಲಿದ್ದ ಸಿಸಿ ಟಿವಿಯ ದೃಶ್ಯಗಳು ನೆರವಾಗಿರುವುದು ಗುಟ್ಟಾಗಿ ಉಳಿದಿಲ್ಲ.