ರಾಜ್ಯ

ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನಧಿಕೃತ ಡಬ್ಬಿ ಅಂಗಡಿ ತೆರವು

ಧಾರವಾಡ prajakiran.com :
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಂಗಳವಾರ
ಧಾರವಾಡದ ಎಸ್ ಡಿ ಎಂ ಎದುರಿನ ಸತ್ತೂರು ಲೇಔಟ್ ನಲ್ಲಿರುವ ನಾಗರಿಕ ಸೌಲಭ್ಯಕ್ಕೆ ಇಟ್ಟಿರುವಂತಹ ನಿವೇಶನದಲ್ಲಿ ಅನಧಿಕೃತ ಡಬ್ಬಿ ಅಂಗಡಿಯನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟು ಹುಡಾ ಸಿಎ ಲ್ಯಾಂಡಿನಲ್ಲಿ ಇಂತಹ ಅನಧಿಕೃತ ಕಟ್ಟಡ,ಅಂಗಡಿ, ಇತ್ಯಾದಿ ಇದ್ದದ್ದು ಸರ್ವೆ ಮಾಡಿ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಯಾರು ಕೂಡ ಸಿಎ ಲ್ಯಾಂಡ್ ನಲ್ಲಿ ಡಬ್ಬಿ ಅಂಗಡಿಗಳು ಕಟ್ಟಡಗಳು ಕಟ್ಟಿದರೆ ತಾವೇ ಸ್ವತಃ ತೆಗೆದುಕೊಳ್ಳಿ ಅಂತಾ ಮನವಿ ಮಾಡಿದ್ದಾರೆ.

ಇಲ್ಲವಾದರೆ ಸರ್ವೆ ನಂತರ ಸಿಎ ಲ್ಯಾಂಡಿನಲ್ಲಿ ಅನಧಿಕೃತವಾಗಿ ನೀವೇನಾದ್ರೂ ಕಟ್ಟಿದ್ದರೆ ಮುಲಾಜಿಲ್ಲದೆ ತೆಗೆದುಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸದಸ್ಯರಾದ ಯಲ್ಲಪ್ಪ ಅರವಳದ, ಸುನೀಲ ಮೊರೆ ಆಯುಕ್ತರಾದ ವಿನಾಯಕ ಪಾಲನಕರ್ ನಗರ ಯೋಜಕ ಸದಸ್ಯರಾದ ವಿವೇಕ ಕಾರೇಕರ್.ಕಾರ್ಯ ನಿರ್ವಾಹಕ ಅಭಿಯಂತರಾದ ಎಂ ರಾಜಶೇಖರ. ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ಉಮೇಶ್ ಬೇವೂರ. ಸಹಾಯಕ ಅಭಿಯಂತರಾದ ಬಸವರಾಜ ದೇವಗಿರಿ, ಎಂ ಎಂ ಶಿಲವಂತರ, ಆರ್ ಜಿ ಪಾಟೀಲ್. ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *