ಧಾರವಾಡ prajakiran.com : ಮರಾಠ ಸಮಾಜಕ್ಕೆ ರಾಜ್ಯ ಸರಕಾರ ನೀಡಿರುವಅಭಿವೃದ್ದಿ ಪ್ರಾಧಿಕಾರ ಬೇಡ, ನಮಗೆ ೨ಎ ಮೀಸಲಾತಿ ಬೇಕು.
ಮುಂದಿನ ದಿನಗಳಲ್ಲಿ ಮೀಸಲಾತಿ ನೀಡದಿದ್ದರೆ ಗ್ರಾಪಂ, ಜಿಪಂ, ತಾಪಂ, ವಿಧಾನಸಭೆ, ಎಂಪಿ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಾವು ಯಡಿಯೂರಪ್ಪ ಬಳಿ ಭಿಕ್ಷೆ ಕೇಳುತ್ತಿಲ್ಲ. ನಾವೇನು ಭಿಕಾರಿಗಳೂ ಅಲ್ಲ, ನಮಗೆ ಐವತ್ತು ಕೋಟಿಯಲ್ಲ. ಐನೂರು ಕೋಟಿ ಕೊಟ್ಟರೂ ಬೇಕಾಗಿಲ್ಲ.
ನಿಮ್ಮ ಲಿಂಗಾಯತ ಸಮಾಜಕ್ಕೆ ಐನೂರು ಕೋಟಿ ಕೊಟ್ಟಿದೀರಿ. ಹಾಗೆಯೇ ಚುನಾವಣೆ ಗಿಮಿಕ್ ಅಂತಾ ಯಾವ ಸಮಾಜಕ್ಕೆ ಏನೇನು ಕೊಡ್ತಿರೋ ಕೊಡಿ.
ಯಾವ ಜಾತಿಗೆ ಎಷ್ಟು ಮತ ಇದೆ ಅಷ್ಟು ಪ್ರಾಧಿಕಾರ ಮಾಡತಾ ಹೋಗಲಿ ಎಂದು ಸಿಎಂ ಬಿ ಎಸ್ ವೈ ವಿರುದ್ದ ಹರಿಹಾಯ್ದರು.
ಮರಾಠ ಸಮಾಜದ ಬಗ್ಗೆ ನಿಮಗೆ ಕಾಳಜಿ ಇದ್ದರೆ 2ಎ ಮೀಸಲಾತಿ ನೀಡಿ. ಈಗಾಗಲೇ ಅವರು ಬೀದರನಲ್ಲೆ ಹೇಳಿದ್ದಾರೆ.
ನಾವೂ ಸ್ವಲ್ಪ ಈಗ ಎಲೆಕ್ಷನ್ ಗಿಮಿಕ್ ಮಾಡ್ತೇವಿ. ನಾವು ಕೂಡ ಸಮಾಜದ ಮುಖಂಡರಿಂದ ಪತ್ರ ಬರೆಯುತ್ತೇವೆ. ಏಳು ದಿನಗಳ ಒಳಗೆ ಮೀಸಲಾತಿ ನಿರ್ಣಯ ಮಾಡಬೇಕು ಎಂದು ಗುಡುಗಿದರು.
ಮೀಸಲಾತಿ ಮಾಡಿದ್ರೆ ಮಾತ್ರ ಮತ ಹಾಕ್ತೇವಿ ಇಲ್ಲದಿದ್ದರೇ ಬೆಳಗಾವಿ, ಮಸ್ಕಿ, ಗ್ರಾಪಂ, ಜಿಪಂ ಎಲ್ಲ ಎಲೆಕ್ಷನ್ ಬಹಿಷ್ಕಾರ ಹಾಕ್ತೇವಿ ಎಂದು ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ ಎಚ್ಚರಿಸಿದರು.