ಹುಕ್ಕೇರಿ prajakiran.com :
ಬೆಳಗಾವಿ ಸಂಸದರು ಆಗಿದ್ದ ಕೇಂದ್ರ ಸಚಿವ ಸುರೇಶ ಅಂಗಡಿ ನಿಧನದಿಂದ ತೇರವಾದ ಬೆಳಗಾವಿ ಲೋಕಸಭೆಯ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ನಾನು ರೇಡಿ ಎಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಹೇಳಿದರು.
ಅವರು ಹುಕ್ಕೇರಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೂತ್ವ ವಿಚಾರಧಾರೆಯ ಧ್ವನಿ ಲೋಕಸಭೆಯಲ್ಲಿ ಇರಬೇಕು ಎಂದು ಕಾರ್ಯಕರ್ತರು , ಹಿತೈಷಿಗಳು ಆಗ್ರಹ ಮಾಡುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭೆಯ ಮರು ಚುನಾವಣೆಯಲ್ಲಿ ಬಿ ಜೆ ಪಿ ಯವರು ಮನಸ್ಸು ಮಾಡಿ ಟಿಕೇಟ್ ನೀಡಿದರೆ ನಾನು ಸ್ಪರ್ಧಿಸುತ್ತೆನೆ ಎಂದು ಹೇಳಿದ್ದಾರೆ.
“ಪ್ರಮೋದ್ ಮುತಾಲಿಕ್ ಜಿ” ಅವರನ್ನು ಬೆಳಗಾವಿಯ ಸಂಸದರನ್ನಾಗಿ ನೋಡುವ ಕನಸನ್ನ ಹಿಂದೂಪರ ಕಾರ್ಯಕರ್ತರು ಕಾಣುತ್ತಿದ್ದಾರೆ.
ಈ ನಿಟ್ಟಿನಲ್ಲಿ ಬಿಜೆಪಿ ನಾಯಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕು.
ಹಿಂದೂತ್ವಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವ ಪ್ರಮೋದ ಮುತಾಲಿಕ್ ಅವರು ಕೋಟ್ಯಾಂತರ ಹಿಂದೂ ಯುವಕರ ಕಣ್ಮಣಿಯಾಗಿದ್ದಾರೆ.
ಅವರು ತಮ್ಮ ಮೊನಚಾದ ಹಾಗೂ ಫೈರ್ ಬ್ರಾಂಡ್ ಭಾಷಣದಿಂದಲೇ ನಾಡಿನ ಗಮನ ಸೆಳೆದಿರುವುದನ್ನು ಇಲ್ಲಿ ಗಮನಿಸಬಹುದು.
ಆರಂಭದಲ್ಲಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್, ಭಜರಂಗದಳ ದೊಂದಿಗೆ ಗುರುತಿಸಿಕೊಂಡು ನಾಡಿನ ಉದ್ದಗಲಕ್ಕೂ ಸಂಚರಿಸಿ, ಹಿಂದು ಸಂಘಟನೆಗಳನ್ನು ಬಲಪಡಿಸಿದ್ದರು.
ಆನಂತರ ಅವರದೆ ಆದ ಶ್ರೀರಾಮಸೇನೆಯನ್ನು ಕಟ್ಟಿ ಹೋರಾಟ ಮುಂದುವರೆಸಿದ್ದಾರೆ.