ಧಾರವಾಡ Prajakiran.com : ತೀವ್ರ ಜಿದ್ದಾಜಿದ್ದಿ ಹಾಗೂ ಪ್ರತಿಷ್ಟೆ ಕಣವಾಗಿ ಮಾರ್ಪಟ್ಟಿದ್ದ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆಯಲ್ಲಿ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಬಣ ಜಯಭೇರಿ ಬಾರಿಸಿದ್ದು,ಇತ್ತಿಹಾದ್ ಗ್ರೂಪ್ ನಿಂದ ಅಖಾಡಕ್ಕೆ ಇಳಿದಿದ್ದ ಇಮ್ರಾನ್ ಕಳ್ಳಿಮನಿ ಬಣಕ್ಕೆ ತೀವ್ರ ಹಿನ್ನಡೆಯಾಗಿದೆ.
ಇಸ್ಮಾಯಿಲ್ ತಮಟಗಾರ ಬಣದಿಂದ ಸ್ಪರ್ಧಿಸಿದ್ದ ಧಾರವಾಡ ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷರಾಗಿ ಇಕ್ಬಾಲ್ ಜಮಾದಾರ್ ಆಯ್ಕೆಯಾಗಿದ್ದು, ಅವರು 6494 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಇಮ್ರಾನ್ ಕಳ್ಳಿಮನಿ 1438 ಮತಗಳನ್ನು ಪಡೆದು ಸೋಲನ್ನು ಅನುಭವಿಸಿದರು.
ಅದೇ ರೀತಿಯಾಗಿ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಅಸ್ಪಕ್ ಅಹ್ಮದ್ ಬೆಟಗೇರಿ 6675 ಮತಗಳನ್ನು ಪಡೆದರೆ, ಮೂಸಾಖಾನ್ ಪಠಾಣ ಅವರು 1288ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಇನ್ನೂ ಕಾರ್ಯದರ್ಶಿ ಯಾಗಿ ನಜೀರ್ ಹುಸೇನ್ ಮನಿಯಾರ್ 6662 ಮತಗಳನ್ನು ಪಡೆದು ಆಯ್ಕೆಯಾದರೆ, ಅವರ ಪ್ರತಿಸ್ಪರ್ಧಿ ರಿಯಾಜ್ ಕಿತ್ತೂರು 1225 ಮತಗಳನ್ನು ಪಡೆದು ಸೋತರು.
ಜಂಟಿ ಕಾರ್ಯದರ್ಶಿ ಯಾಗಿ ಶಕೀಲ್ ತಮಟಗಾರ 6306ಮತಗಳನ್ನು ಪಡೆದು ಆಯ್ಕೆಯಾದರೆ, ಇಫ್ರಾನ್ ತಾಡಪತ್ರಿ 1521 ಮತಗಳಿಗೆ ತೃಪ್ತಿ ಪಟ್ಟಿದ್ಧಾರೆ.
ಇಮ್ರಾನ್ ಕಳ್ಳಿಮನಿಯ ಇತ್ತಿಹಾದ್ ಗ್ರೂಪ್ ದಿಂದ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಸೋಲು ಅನುಭವಿಸಿದರು.
ಅದೇರೀತಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿರಿಯ ವಕೀಲ ಜಮಾದಾರ ಅವರು ಕೂಡ ಸೋಲು ಅನುಭವಿಸಿದರು.
ಒಟ್ಟಾರೆ ಇಸ್ಮಾಯಿಲ್ ತಮಟಗಾರ ಬಣ ಭರ್ಜರಿ ಯಶಸ್ಸು ಗಳಿಸಿ, ಮೇಲುಗೈ ಸಾಧಿಸಿದ್ದು, ಜಯಭೇರಿ ಬಾರಿಸಿದ ಬಳಿಕ ಅಂಜುಮನ್ ಇಸ್ಲಾಂ ಸಂಸ್ಥೆ ಆವರಣದಲ್ಲಿ ಭರ್ಜರಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿತು.