ಬೆಳಗಾವಿ prajakiran. com : ಭಾರೀ ಮಳೆ ನಡುವೆ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಹಲವಡೆಯಲ್ಲಿ ಬೆಳ್ಳಂ ಬೆಳಗ್ಗೆ ಭೂಕಂಪನ ಅನುಭವವಾಗಿದೆ.
ಇದರಿಂದಾಗಿ ಜನರು ಕೆಲಕಾಲ ಆತಂಕಗೊಂಡು ಭಯಭೀತರಾಗಿದ್ದರು.
ಅಲ್ಲದೆ, ಮನೆಯಿಂದ ಹೊರಗೆ ಓಡಿ ಬಂದು ಏನಾಗುತ್ತಿದೆ ಎಂದು ನೋಡುವಷ್ಟರಲ್ಲೇ ಭೂಮಿ ಕಂಪಿಸಿದ ಅನುಭವವಾಗಿದೆ.
ಬೆಳಗ್ಗೆ 6.15ರ ಸುಮಾರಿಗೆ ನಿದ್ದೆ ಮಂಪರಿನಲ್ಲಿದ್ದ ಜನ ಭೂಮಿ ನಲುಗಿದ ಶಬ್ದ ಗುನುಗುನಿಸಿದ ಹಿನ್ನೆಲೆಯಲ್ಲಿ ಎದ್ನೊ ಬಿದ್ನೋ ಅಂತ ಹೊರಗೆ ಬಂದಿದ್ದಾರೆ.
ರಿಕ್ಟರ್ ಮಾಪನದಲ್ಲಿ 4.9ರಷ್ಟು ತೀವ್ರತೆ ದಾಖಲಿಸಿದೆ. ಬರುವ ದಿನಗಳಲ್ಲಿ ಮತ್ತೆ ಭೂಮಿ ಕಂಪಿಸುವ ಸಾಧ್ಯತೆ ಇದೆ ಎಂದು ಭೂ ವಿಜ್ಞಾನಿಗಳು ವಿಶ್ಲೇಷಣೆ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಭೂಮಿ ಕಂಪಿಸಿದ ಬೆನ್ನಲ್ಲೇ ಉತ್ತರ ಕರ್ನಾಟಕ ಭಾಗಕ್ಕೂ ವಿಸ್ತರಿಸಿದ್ದು, ಜನರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಾಗಿದೆ