ರಾಜ್ಯ

ಧಾರವಾಡದ ಜೋಡಳ್ಳಿ ಬಳಿ ಬಸ್ ಪಲ್ಟಿ : ತಪ್ಪಿದ ಭಾರಿ ಅವಘಡ

ಧಾರವಾಡ prajakiran.com : ಧಾರವಾಡ ಜಿಲ್ಲೆಯ ಜೋಡಳ್ಳಿ ಬಳಿ ಬಸ್ ಪಲ್ಟಿಯಾದ ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ.

ಆದರೂ ಅದೃಷ್ಟವಶಾತದ ಭಾರೀ ಅವಘಡವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಧಾರವಾಡದಿಂದ ಕಲಘಟಗಿ ಕಡೆಗೆ
ಹೊರಟಿದ್ದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಜೋಡಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಇದರಿಂದಾಗಿ ಬಸ್ಸಿನಲ್ಲಿದ್ದ 25ಕ್ಕೂ
ಹೆಚ್ಚು ಜನ ಪ್ರಯಾಣಿಕರು ಕೆಲ ಕಾಲ ಅತಂಕಗೊಂಡಿದ್ದರು.

ಆದರೆ, ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ 
ಗಾಯಗಳಾಗಿಲ್ಲ ಎಂದು ತಿಳಿಸಿದರು.

ಬಸ್ಸು ಪಲ್ಟಿಯಾದ ಸ್ಥಳದ ಪಕ್ಕದಲ್ಲಿಯೇ ತಗ್ಗು ಪ್ರದೇಶ ಇದ್ದು, ಮಳೆಯ ನೀರು ಇತ್ತು.

 ನೀರು ಸಂಗ್ರಹವಾಗಿದ್ದರಿಂದ  ಕೆರೆಯಂತಾಗಿತ್ತು. ಬಸ್ ಇನ್ನು ಸ್ವಲ್ಪ ಮುಂದೆ ಸಾಗಿದ್ದರೆ ಅಥವಾ ಇನ್ನೊಂದು ಸುತ್ತು ಹೊರಳಿದ್ದರೂ ದೊಡ್ಡ ಅನಾಹುತವಾಗುತ್ತಿತ್ತು ಎಂದು ವಿವರಿಸಿದರು.

ಬಸ್ಸು ಉರಳಿ ಬಿದ್ದಿದ್ದನ್ನು ಕಂಡ
ಅಕ್ಕ ಪಕ್ಕ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಜನರು ನೆರವಿಗೆ ಧಾವಿಸಿ ಬಸ್ಸಿನಲ್ಲಿ ಸಿಲುಕಿದವರನ್ನು ರಕ್ಷಣೆ
ಮಾಡಿದ್ದಾರೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *