ಧಾರವಾಡ prajakiran. com : ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ,ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಚಂದ್ರು ವಿರುಪಾಕ್ಷಪ್ಪ ಲಕ್ಕಮ್ಮನವರ, 150 ಮಕ್ಕಳಿಗೆ ತನ್ನ ಸ್ವಂತ ಹಣದಲ್ಲಿ ಶಾಲಾ ಸಮವಸ್ತ್ರಗಳನ್ನು ನೀಡಿದ್ದಾರೆ.
ಇವರ ಈ ಕಾರ್ಯಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಧಾರವಾಡದ ಪ್ರತಿಷ್ಠಿತ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ, ಹೆಬ್ಬಳ್ಳಿಯಲ್ಲಿ ಸತ್ಕರಿಸಿ ಶುಭ ಹಾರೈಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಚಂದ್ರಶೇಖರ, ಎಲ್ಲಾ ಪಾಲಕ ಪೋಷಕರು ನಮ್ಮನ್ನು ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಲಿ ಎಂದು ಆಯ್ಕೆ ಮಾಡಿದ್ದಾರೆ.
ಶಾಲೆ ದೇವ ಮಂದಿರ ಇದ್ದಂತೆ, ಇಲ್ಲಿ ಕಲಿಯುವ ಮಕ್ಕಳು ದೇವರ ಸಮಾನ, ಆದ್ದರಿಂದ ನಾನು ಪ್ರೀತಿಯಿಂದ ಸ್ವ ಸಂತೋಷದಿಂದ ಮಕ್ಕಳಿಗೆ ಅಲ್ಪ ಸಹಾಯ ಮಾಡಿರುವೆ, ಶಾಲೆಯ ಪ್ರಗತಿಗಾಗಿ ನಾನು ಸದಾ ಸಿದ್ದ ಎಂದರು.
ನಮ್ಮ ಶಾಲೆಯಲ್ಲಿ ಎಲ್ಲಾ ವರ್ಗ ಗಳಲ್ಲಿ ಪ್ಯಾನ್ ವ್ಯವಸ್ಥೆ ಮತ್ತು ಕಂಪ್ಯೂಟರ್, ವ್ಯವಸ್ಥೆಯನ್ನು ಮಾಡಲು ಪ್ರಯತ್ನ ಮಾಡಲಾಗುವುದು ಎಂದರು.
ಮತ್ತೊಬ್ಬ ಸದಸ್ಯ ಹಟೇಲಸಾಬ ಗುಡಸಲಮನಿ ಮುಖ್ಯ ಶಿಕ್ಷಕಿ ಬಿ ಎಂ ಸುತಾರ, ಎಲ್ ಐ ಲಕ್ಕಮ್ಮನವರ ಇದ್ದರು.