ಧಾರವಾಡ prajakiran.com : ತನ್ನ ಪ್ರೀತಿ-ಪ್ರೇಮಕ್ಕೆ ತಾಯಿ ಪದೇ ಪದೇ ಅಡ್ಡಿಯಾಗುತ್ತಿದ್ದಾಳೆ ಎಂದುಕೊಂಡ ಮಗಳು ಪ್ರಿಯಕರನ ಜೊತೆಗೂಡಿ, ತಾಯಿಗೆ ಚಾಕುವಿನಿದ್ದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಧಾರವಾಡದ ಹಾವೇರಿಪೇಟೆಯಲ್ಲಿ ನಡೆದಿದೆ.
ಜೀಜಾಬಾಯಿ ಎಂಬ ಮಹಿಳೆಯೇ ಚಾಕುವಿನಿಂದ ಮಾರಣಾಂತಿಕ ಹಲ್ಲೇಗೊಳಗಾದವರು ಎಂದು ಗುರುತಿಸಲಾಗಿದೆ.
ಮಗಳು ಹಾಗೂ ಆಕೆಯ ಪ್ರಿಯಕರನಿಂದ ಇಂತಹ ಕೃತ್ಯ ನಡೆದಿದೆ.
ಜೀಜಾಬಾಯಿ ಮಗಳು ತನ್ನ ಕಿರಣ್ ಎಂಬ ಪ್ರಿಯಕರನ ಜೊತೆ ಸೇರಿ ತಾಯಿಗೆ ಚಾಕು ಇರಿದು ಪ್ರೇಮಿಗಳು ಪರಾರಿಯಾದ ಘಟನೆ ನಡೆದಿದೆ.
ಇಂದು ಬೆಳಗಿನಜಾವ 2.45 ರ ಸುಮಾರಿಗೆ ಜೀಜಾಬಾಯಿ ಮನೆಗೆ ಹಿತ್ತಲು ಬಾಗಿಲಿನಿಂದ ಬಂದಿದ್ದ ಕಿರಣ. ತಾಯಿ ಮಲಗಿದ್ದಾಗ ಹಿತ್ತಲು ಬಾಗಿಲಿನ ಕದ ತೆಗೆದು ಕಿರಣ್ ನನ್ನು ಒಳಗೆ ಕರೆದೊಯ್ದದ್ದಳು ಎನ್ನಲಾಗಿದೆ.
ಕಣ್ಣು ಬಿಟ್ಟು ನೋಡಿದಾಗ ತನ್ನ ಮಗಳು ಹಾಗೂ ಆಕೆಯ ಪ್ರಿಯಕರನ ನೋಡಿ ಕಂಗಾಲಾದ ಜೀಜಾಬಾಯಿ.
ಎಚ್ಚರಗೊಳ್ಳುತ್ತಿದ್ದೆಯೇ ಬೆನ್ನಿಗೇ ಚಾಕು ಇರಿದು ಇಬ್ಬರು ಎಸ್ಕೇಪ್ ಆಗಿದ್ದಾರೆ.
ಜೀಜಾಬಾಯಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಜೀಜಾಬಾಯಿಯನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಿದ್ದಾರೆ.
ಸದ್ಯ ಜೀಜಾಬಾಯಿ ಪರಿಸ್ಥಿತಿ ಗಂಭೀರವಾಗಿದ್ದು, ಐಸಿಯು( ICU ) ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಜೀಜಾಬಾಯಿ ಹಾವೇರಿಯಲ್ಲಿ ಖಜಾನೆ ಇಲಾಖೆಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಹಲವು ವರ್ಷಗಳಿಂದ ಕಿರಣ ಎಂಬುವನ ಜೊತೆಗೆ ಜೀಜಾಬಾಯಿ ಮಗಳಿಗೆ ಪ್ರೀತಿ-ಪ್ರೇಮ ಮೂಡಿತ್ತು.
ಕಳೆದ ಎರಡು ತಿಂಗಳ ಹಿಂದೆ ಕಿರಣ ಜೊತೆ ಜೀಜಾಬಾಯಿಯ ಮಗಳು
ಓಡಿ ಹೋಗಿದ್ದ ಘಟನೆ ನಡೆದಿತ್ತು
ಈ ಹಿನ್ನೆಲೆಯಲ್ಲಿ ಕಿರಣ ಮೇಲೆ ಪೋಕ್ಸೋ ಪ್ರಕರಣವನ್ನು ಜೀಜಾಬಾಯಿ
ದಾಖಲು ಮಾಡಿದ್ದರು.
ಕಳೆದ 2 ತಿಂಗಳಿಂದ ಮಗಳು ಕೂಡ ರಿಮ್ಯಾಂಡ್ ಹೋಮ್ ನಲ್ಲಿದ್ದರು.
ಕಿರಣ್ ಎರಡು ತಿಂಗಳಿಂದ ಜೈಲಿನಲ್ಲಿದ್ದು ಬೇಲ್ ಮೇಲೆ ಹೊರಗೆ ಬಂದಿದ್ದ ಎನ್ನಲಾಗಿದೆ.
ಈ ಕುರಿತಂತೆ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.