ಬೆಂಗಳೂರು prajakiran.com : ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿ ಸಚಿವರ ಸಭೆ ನಡೆಸಿದ ಬೆನ್ನಲ್ಲೇ ಶಾಸಕರ ಭವನದಲ್ಲಿ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಧಾರವಾಡ ಪಶ್ಚಿಮ ವಿಧಾನಸಭೆ ಶಾಸಕ ಅರವಿಂದ ಬೆಲ್ಲದ ಗುಪ್ತ ಸಭೆ ನಡೆಸಿದರು.
ಈ ಭೇಟಿ ಹಾಗೂ ಅವರ ಮಾತುಕತೆ ತೀವ್ರ ಕುತೂಹಲ ಕೆರಳಿಸಿದೆ.
ಈ ಇಬ್ಬರು ಶಾಸಕರು ರಾಜ್ಯದ ಬಿಜೆಪಿ ನಾಯಕತ್ವ ಅದರಲ್ಲೂ ಸಿಎಂ ಯಡಿಯೂರಪ್ಪ ವಿರುದ್ದ ಬಹಿರಂಗವಾಗಿ ಸಮರ ಸಾರಿದ್ದರಿಂದ ಅವರ ನಡೆ ಅಚ್ಚರಿ ಮೂಡಿಸಿದೆ.
ಈ ಬಗ್ಗೆ ಪಕ್ಷದ ನಾಯಕರಿಗೂ ತಲೆ ಬಿಸಿಯಾಗಿದೆ. ಅಲ್ಲದೆ ಇದೇ ವೇಳೆ ವಲಸೆ ಸಚಿವರು ಕೂಡ ಪ್ರತ್ಯೇಕವಾಗಿ ಸಭೆ ನಡೆಸಿ ಪದೇ ಪದೇ ಸಚಿವ ಈಶ್ವರಪ್ಪ ಅಪಮಾನ ಕುರಿತು ದೂರು ನೀಡಲು ನಿರ್ಧರಿಸಿದ್ದಾರೆ.
ರಾಜ್ಯ ಉಸ್ತುವಾರಿ ಅರುಣಸಿಂಗ್ ಎಲ್ಲರನ್ನೂ ಸಮಾಧಾನಪಡಿಸಿ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಕಾದು ನೋಡಬೇಕು.