ಧಾರವಾಡ prajakiran.com : ಕಳೆದ ಒಂದು ವಾರದಿಂದ ಧಾರವಾಡದ ನಗರದ ವಿವಿಧ ಪ್ರಮುಖ ಕಡೆಗಳಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಧಾರವಾಡದ ಸರಸ್ವತಪೂರ ಮತ್ತು ಸುತ್ತಮುತ್ತಲಿನ ನಗರದ ದೇವತಾರಾ ಅಪಾರ್ಟಮೆಂಟ್ ನಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ನೀರು ವಾಸನೆ ಸಹ ಬರುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಪ್ರಜಾಕಿರಣ.ಕಾಮ್ ಎದುರು ದೂರಿದ್ದಾರೆ.
ಈ ಕಲುಷಿತ ನೀರು ಪೂರೈಕೆಯಿಂದ ಅಲ್ಲಿನ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಜಲಮಂಡಳಿಯವರಿಗೆ ದೂರಿದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎನ್.ಬಿ. ಶೂರಪಾಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
೨೪/೭ ಜಲಮಂಡಳಿಯವರು ಮಹಾನಗರ ಪಾಲಿಕೆ ಮೇಲೆ ಹಾಕಿ ನುಣುಚಿಕೊಂಡರೆ, ಜಲಮಂಡಳಿಯವರು ಮಹಾನಗರ ಪಾಲಿಕೆ ಮೇಲೆ ಹಾಕುತ್ತಿದ್ದಾರೆ. ಹಾಗಿದ್ದರೆ ನೀರು ಪೂರೈಕೆ ಯಾರು ಮಾಡುತ್ತಿದ್ದಾರೆ ಎಂಬ ಯಕ್ಷಪ್ರಶ್ನೆ ಎದುರಾಗಿದೆ.
ತಕ್ಷಣವೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ನಿವಾಸಿಗಳಾದ ಪ್ರಾಣೇಶ ದೇಶಪಾಂಡೆ ಹಾಗೂ ಅಪಾರ್ಟಮೆಂಟ್ ನಿವಾಸಿ ಮಂಜುಳಾ ಸೇರಿದಂತೆ ಅನೇಕರು ಎಚ್ಚರಿಸಿದ್ದಾರೆ.