ರಾಜ್ಯ

ಧಾರವಾಡದ ಮತದಾರರ ಪಟ್ಟಿಯಲ್ಲಿನ ಹೆಸರು ಕೈ ಬಿಡುವ ಸಂಚು : ದೀಪಕ ಚಿಂಚೋರೆ ಆರೋಪ

ಧಾರವಾಡ ಪ್ರಜಾಕಿರಣ.ಕಾಮ್ : ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ವ್ಯವಸ್ಥಿತವಾಗಿ ಕೈ ಬಿಡುವ ಸಂಚನ್ನು ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ನಡೆಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ನೇರವಾಗಿ ಆರೋಪಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಧಾರವಾಡದ ನವಲೂರು, ಕಲ್ಯಾಣ ನಗರ ಸೇರಿದಂತೆ ಹತ್ತಕ್ಕೂ ಹೆಚ್ಚು ವಾರ್ಡ್ ನಲ್ಲಿ ಮನೆ ಮನೆ ಸರ್ವೆ ಮಾಡುತ್ತಿದ್ದಾರೆ. ಮೋದಿ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ.

ಅದೇ ರೀತಿ ಸ್ಥಳೀಯ ಶಾಸಕರ ಬಗ್ಗೆ ಕೂಡ ಒಲುವು ಇದೆಯೇ ಎಂಬುದನ್ನು ಸಂಗ್ರಹಿಸಲು ಪ್ರಯತ್ನ ನಡೆದಿದೆ ಎಂದು ದೂರಿದರು.

ನವಲೂರಿನಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದ ವೇಳೆ ಅನುಮಾನಗೊಂಡ ನಮ್ಮ ಕಾರ್ಯಕರ್ತರು ಮೂರು ಜನರ ತಂಡದ ಬಳಿ ವಿಚಾರಿಸಿದಾಗ ಈ ಆತಂಕಕಾರಿ ಅಂಶ ಹೊರಬಿದ್ದಿದೆ.

ಶಾಸಕರು ಚುನಾವಣೆ ಭಯದಿಂದ ಸರ್ವೆ ಕಾರ್ಯ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು.

ಹುಬ್ಬಳ್ಳಿ ಧಾರವಾಡ- 74 ಪಶ್ಚಿಮ ಕ್ಷೇತ್ರದ ವ್ಯಾಪ್ತಿಯಲ್ಲಿ ಅಭಿಪ್ರಾಯ ಸಂಗ್ರಹಿಸಿ, ಯಾವ ಮತ ತಮಗೆ ಬೀಳುವುದಿಲ್ಲ. ಅದನ್ನು ಡೆಲೀಟ್ ಮಾಡಲಾಗುತ್ತದೆ ಎಂದು ಆರೋಪಿಸಿದರು.

ಈಗಾಗಲೇ ಮಹಾನಗರ ಪಾಲಿಕೆ ಚುನಾವಣೆ ವೇಳೆ ಕೆಲಗೇರಿಯ 500 ವೋಟ್ ಡೆಲೀಟ್ ಮಾಡಲಾಗಿದೆ. ಇಂತಹ ಚಿಲ್ಲರ್ ರಾಜಕೀಯ ಮಾಡಬಾರದು ಎಂದು ಶಾಸಕರ ವಿರುದ್ಧ ದೀಪಕ ಚಿಂಚೋರೆ ಹರಿಹಾಯ್ದರು.

ಹತ್ತು ವಾರ್ಡ್ ಗಳಲ್ಲಿ ಮಧ್ಯಮ ವರ್ಗದ ಜನರನ್ನೇ ಟಾರ್ಗೆಟ್ ಮಾಡಲಾಗಿದೆ. ಅವರಿಗೆ ತಾಕತ್ ಇದ್ದರೆ ಬೆಲೆ ಎರಿಕೆಯಿಂದ ಜನ ಸಂಕಷ್ಟದಲ್ಲಿರುವುದನ್ನು ಸರ್ವೆ ಮಾಡಿಸಲಿ.

ಈಗಾಗಲೇ
2-3 ಸಾವಿರ ಜನರ ಮಾಹಿತಿಯನ್ನು ಸಂಗ್ರಹಿಸಿದ್ದಾರೆ‌ ಎಂದು ದೀಪಕ ಚಿಂಚೋರೆ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರವಿ ಮಾಳಗೇರ, ವಸಂತ ಅರ್ಕಾಚಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *