ಧಾರವಾಡ ಪ್ರಜಾಕಿರಣ.ಕಾಮ್ : ಧಾರವಾಡದ ಸುಪರ್ ಮಾರ್ಕೆಟ್ ನಲ್ಲಿ ಸೋಮವಾರ ಬೆಳಗಿನ ಜಾವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೀದಿಬದಿ ಡಬ್ಬಾ ಅಂಗಡಿಗಳು, ತಳ್ಳುಗಾಡಿಗಳ ಒಕ್ಕಲೆಬ್ಬಿಸಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ದೀಪಕ ಚಿಂಚೋರೆ ಆರೋಪಿಸಿದರು.
ಅವರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
60 ವರ್ಷದಿಂದ ಜೀವನ ಸಾಗಿಸುವ ಹಣ್ಣಿನ ವ್ಯಾಪಾರಿಗಳು, ತಳ್ಳುಗಾಡಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಏಕಾಎಕಿ ಪರ್ಯಾಯ ವ್ಯವಸ್ಥೆ ಇಲ್ಲದೆ ಕಿತ್ತು ಹಾಕುವುದು ಯಾವ ಪುರುಷಾರ್ಥಕ್ಮೆ ಎಂದು ಕಿಡಿಕಾರಿದರು .
ಬಿಜೆಪಿ ಸರ್ಕಾರ ಉದ್ಯೋಗ ಇದ್ದವರಿಗೆ ನಿರುದ್ಯೋಗಿಗಳನ್ನಾಗಿ ಮಾಡುತ್ತಿದೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಆಯುಕ್ತ ಸಬರದ ಹಿಟ್ಲರ್ ಆಡಳಿತ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪರ್ ಮಾರ್ಕಟ್ ನಲ್ಲಿ ಬಸ್ ಓಡಾಡುವಾಗ ಹಾಗೆ ಮಾಡಬೇಕು ಎಂದಾದರೆ ಸ್ಮಾಟ್ ಸಿಟಿಯಲ್ಲಿ ಜನರನ್ನು ಬೀದಿಪಾಲು ಮಾಡುವುದೇ ಎಂದು ಗುಡುಗಿದರು.
ಬೆಲ್ಲದ ಮನೆ ಮುಂದೆಯೇ ತಗ್ಗು ಗುಂಡಿ ಬಿದ್ದಿವೆ. ಕೋಟ್ಯಾಂತರ ರೂಪಾಯಿ ಹಾಳಾಗಿವೆ ಎಂದರು.
ತೆರವು ಕಾರ್ಯಾಚರಣೆ ಬಗ್ಗೆ
ಡಿಸಿ, ಕಮಿಶನರ್ ಜೊತೆಗೆ ಮಾತನಾಡಿದೆ.
ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಬಡವರ ಕಾಳಜಿ ಇಲ್ಲ. ಅವರನ್ನು ಅಂಗವಿಕಲರ ಮಾಡಿ ಸ್ಮಾಟ್ ಆಗಬೇಡಿ. ಭಿಕ್ಷೆ ಬೇಡಿಸುವ ಕೆಲಸ ಮಾಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾರದೊಳಗೆ ಕಾಮತ್ ರಸ್ತೆಯಲ್ಲಿರುವ ಇಪ್ಪತ್ತಕ್ಕೂ ಹೆಚ್ಚು ಹಣ್ಣು, ತರಕಾರಿ ಮಾರಾಟ ಮಾಡುವ ಜನರಿಗೆ
ಪರ್ಯಾಯ ವ್ಯವಸ್ಥೆ ಕಲ್ಪಿಸದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ದೀಪಕ ಚಿಂಚೋರೆ ಎಚ್ಚರಿಸಿದರು.
ವ್ಯಾಪಾರಸ್ಥರು ತೆರವು ಕಾರ್ಯಾಚರಣೆಯಿಂದ ಭಯಭೀತಗೊಂಡಿದ್ದಾರೆ.
ಸುಪರ್ ಮಾರ್ಕಟ್ ನಲ್ಲಿ ಕೂಡ ಈ ಹಿಂದೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಕೈ ಕೊಟ್ಟಿದ್ದಾರೆ.
ಪರ್ಯಾಯ ವ್ಯವಸ್ಥೆ ಮಾಡಿದರೆ ತಾವೇ ಅಂಗಡಿ ತೆರವು ಮಾಡಿಕೊಂಡು ಹೋಗುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ದೀಪಕ ಚಿಂಚೋರೆ ಹೇಳಿದರು.