ರಾಜ್ಯ

ಬೆಂಗಳೂರಿನ ಯಲಹಂಕ ಮೇಲ್ ಸೇತುವೆಗೆ ವೀರ ಸಾರ್ವಕರ್ ಹೆಸರಿಟ್ಟ ಶ್ರೀರಾಮಸೇನೆ…!

ಬೆಂಗಳೂರು prajakiran.com : ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬೆಂಗಳೂರಿನ ಯಲಹಂಕ ಮೇಲ್ ಸೇತುವೆಗೆ ಶ್ರೀರಾಮಸೇನೆ ಕಾರ್ಯಕರ್ತರು ವೀರ ಸಾರ್ವಕರ್ ಹೆಸರಿಟ್ಟು ನಾಮಫಲಕವನ್ನು ಅನಾವರಣಗೊಳಿಸಿದ್ದಾರೆ.

ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಶ್ರೀ ಗಂಗಾಧರ್ ಕುಲಕರ್ಣಿಯವರ ಸಾರಥ್ಯದಲ್ಲಿ ಬೆಂಗಳೂರು ಮಹಾನಗರ ಅಧ್ಯಕ್ಷ ಚಂದ್ರಶೇಖರ್( ಶೇಕಿ) ಯವರ ನೇತೃತ್ವ,ದಲ್ಲಿ ರಾಜ್ಯ ಕಾರ್ಯದರ್ಶಿ ಹರೀಶ್ ಬೆಂಗಳೂರು ಹಾಗೂ ಎಲ್ಲಾ ನಗರ ಪದಾಧಿಕಾರಿಗಳು, ಶ್ರೀರಾಮಸೇನೆ ಕಾರ್ಯಕರ್ತರ ಪಡೆ  ಇದಕ್ಕೆ ಸಾಕ್ಷಿಯಾಯಿತು.

ಇದಕ್ಕೆ ಈ ಹಿಂದೆ ರಾಜ್ಯದ ಬಿಜೆಪಿ ಸರಕಾರ ಸಮ್ಮತಿ ಕೂಡ ಸಮ್ಮತಿ ಸೂಚಿಸಿತ್ತು. ಅಲ್ಲದೆ, ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆಗೆ ಮುಹೂರ್ತ ನಿಗದಿ ಪಡಿಸಿದ್ದರು.  

ಆದರೆ ಕೊನೆ ಗಳಿಗೆಯಲ್ಲಿ ಅದರ ವಿರುದ್ದ ಕಾಂಗ್ರೆಸ್, ಜೆಡಿಎಸ್ ನಾಯಕರು ಮುಗಿಬಿದ್ದಿದ್ದರು. ಇದರಿಂದಾಗಿ ಹಿಂದೆ ಸರಿದಿದ್ದ ಸರಕಾರಸದ್ಯಕ್ಕೆ ಅದರ ಉಸಾಬರಿಯೇ ಬೇಡವೆಂದು ಸುಮ್ಮನಾಗಿದ್ದರು.

ಇದರಿಂದಾಗಿ ಇದು ತಾರಕಕ್ಕೆ ಏರಿದ್ದು, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿತ್ತು. ಅಲ್ಲದೆ, ಪರ ವಿರೋಧ ಚರ್ಚೆಗಳು ತೀವ್ರಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *