ಧಾರವಾಡ prajakiran.com : ಮಠ ಮಾನ್ಯಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಅನುದಾನದಲ್ಲಿ ಶೇ.30% ಕಮಿಷನ್ ಹಣ ಪಡೆಯಲಾಗುತ್ತಿದೆ ಎಂಬ ಕೆಲ ಮಾಠಾಧೀಷರು ನೀಡಿರುವ ಆರೋಪದಲ್ಲಿ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸತ್ಯಾoಶವಿಲ್ಲ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದ್ದಾರೆ.
ನಮ್ಮ ಧಾರವಾಡ 71 ವಿಧಾನ ಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಅನೇಕ ಮಠ ಮಂದಿರಗಳ ಅಭಿವೃದ್ಧಿಗಾಗಿ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠ, ಗರಗ ಮಡಿವಾಳೇಶ್ವರ ಮಠ ಹಾಗೂ ಅಮ್ಮಿನಬಾವಿ ಪಂಚಗೃಹ ಹಿರೇಮಠ ಸೇರಿದಂತೆ ಹಲವಾರು ಮಠ ಮಂದಿರಗಳಿಗೆ ಮುಖ್ಯ ಮಂತ್ರಿಗಳ ಅನುದಾನದ ಹಣ ಬಿಡುಗಡೆಗೊಳಿಸಿದ್ದಾರೆ.
ಆದರೆ ಬಿಡುಗಡೆಯಾದ ಹಣದಲ್ಲಿ ಒಂದು ರೂ.ಗಳ ಹಣ ಕಡಿತವಾಗದೇ ಸಂಪೂರ್ಣ ಹಣ ಈಗಾಗಲೇ ಬಿಡುಗಡೆಯಾಗಿದೆ.
ಹೀಗಾಗಿ ನಮ್ಮ ಭಾಗದಲ್ಲಿ ಸಾಕಷ್ಟು ಮಠ ಮಂದಿರಗಳು ಅಭಿವೃದ್ಧಿಯಾಗುತ್ತಿವೆ.
ರಾಜ್ಯ ಸರಕಾರದ ಅನುದಾನದಿಂದ ಮಠ ಮಂದಿರಗಳ ಅಭಿವೃದ್ಧಿ ಆಗುತ್ತಿದ್ದು, ಭಕ್ತರು ಸಂತೃಪ್ತಿ ಹೊಂದಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ.