ರಾಜ್ಯ

ಮಠದ ಅನುದಾನ ಬಿಡುಗಡೆಗೆ ಶೇ.30% ಕಮಿಷನ್ ಆರೋಪದಲ್ಲಿ ಸತ್ಯಾoಶವಿಲ್ಲ

ಧಾರವಾಡ prajakiran.com : ಮಠ ಮಾನ್ಯಗಳಿಗೆ ರಾಜ್ಯ ಸರಕಾರ ನೀಡುತ್ತಿರುವ ಅನುದಾನದಲ್ಲಿ ಶೇ.30% ಕಮಿಷನ್ ಹಣ ಪಡೆಯಲಾಗುತ್ತಿದೆ ಎಂಬ ಕೆಲ ಮಾಠಾಧೀಷರು ನೀಡಿರುವ ಆರೋಪದಲ್ಲಿ ನಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಸತ್ಯಾoಶವಿಲ್ಲ ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದ್ದಾರೆ.       

 ನಮ್ಮ ಧಾರವಾಡ 71 ವಿಧಾನ ಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಅನೇಕ ಮಠ ಮಂದಿರಗಳ ಅಭಿವೃದ್ಧಿಗಾಗಿ  ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠ, ಗರಗ ಮಡಿವಾಳೇಶ್ವರ ಮಠ ಹಾಗೂ ಅಮ್ಮಿನಬಾವಿ ಪಂಚಗೃಹ ಹಿರೇಮಠ ಸೇರಿದಂತೆ ಹಲವಾರು ಮಠ ಮಂದಿರಗಳಿಗೆ ಮುಖ್ಯ ಮಂತ್ರಿಗಳ ಅನುದಾನದ  ಹಣ ಬಿಡುಗಡೆಗೊಳಿಸಿದ್ದಾರೆ.

ಆದರೆ ಬಿಡುಗಡೆಯಾದ ಹಣದಲ್ಲಿ ಒಂದು ರೂ.ಗಳ ಹಣ ಕಡಿತವಾಗದೇ ಸಂಪೂರ್ಣ ಹಣ ಈಗಾಗಲೇ ಬಿಡುಗಡೆಯಾಗಿದೆ.

ಹೀಗಾಗಿ ನಮ್ಮ ಭಾಗದಲ್ಲಿ ಸಾಕಷ್ಟು ಮಠ ಮಂದಿರಗಳು ಅಭಿವೃದ್ಧಿಯಾಗುತ್ತಿವೆ.

ರಾಜ್ಯ ಸರಕಾರದ ಅನುದಾನದಿಂದ ಮಠ ಮಂದಿರಗಳ ಅಭಿವೃದ್ಧಿ ಆಗುತ್ತಿದ್ದು, ಭಕ್ತರು ಸಂತೃಪ್ತಿ ಹೊಂದಿದ್ದಾರೆ ಎಂದು ಶ್ರೀಗಳು ತಿಳಿಸಿದ್ದಾರೆ. 

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *