ಜನಸಂದಣಿ ತಪ್ಪಿಸಲು ಪರಿಷ್ಕೃತ ಆದೇಶ
ಧಾರವಾಡ prajakiran.com : ಮಾರುಕಟ್ಟೆಯಲ್ಲಿ ಆಗುತ್ತಿರುವ ಜನಸಂದಣಿ, ನೂಕು ನುಗ್ಗಲು ತಪ್ಪಿಸಲು ರಾಜ್ಯ ಸರ್ಕಾರ ಮಾರ್ಗಸೂಚಿ ಪರಿಷ್ಕರಿಸಿ ಆದೇಶ ಮಾಡಿದೆ.
ಸಂತೆ, ವಾರದ ಸಂತೆಗಳನ್ನು
ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಇದರ ಬದಲಿಗೆ ಹಣ್ಣು, ತರಕಾರಿ, ಹಾಲಿನ ಬೂತ್ ಗಳು, ತಳ್ಳು ಗಾಡಿಗಳಿಗೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮಾರಾಟ ಮಾಡಲು ಅವಧಿ ವಿಸ್ತರಿಸಲಾಗಿದೆ.
ಎಪಿಎಂಸಿ ಹಾಗೂ ದಿನಸಿ ಅಂಗಡಿಗಳ ಮಾರಾಟ ಅವಧಿಯನ್ನು ಬೆಳಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಸರ್ಕಾರದ ವಿಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ಎಸ್ ಮಂಜುನಾಥ ಪ್ರಸಾದ ಆದೇಶಿಸಿದ್ದಾರೆ.