ಹುಬ್ಬಳ್ಳಿ prajakiran. com : ರಾಜ್ಯದಲ್ಲಿ ದಿನೆ ದಿನೆ ಒಂದಿಲ್ಲೊಂದು ಗದ್ದಲ, ಗಲಾಟೆ ಸೃಷ್ಟಿಸುವ ಕೃತ್ಯಗಳು ನಡಿಯುತ್ತಲೇ ಇವೆ.
ಅಷ್ಟೇ ಅಲ್ಲದೆ ಹುಬ್ಬಳ್ಳಿ ಧಾರವಾಡದಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಗಿದೆ.
ಕಳೆದ ನಾಲ್ಕೈದು ದಿನಗಳ ಹಿಂದೆ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆಯಿಂದ ವಾಣಿಜ್ಯ ನಗರಿ ಜನರು ಭಯಬೀತರಾಗಿದ್ದರು.
ಆದ ಕಾರಣ ಹಿಂದೂ ಮುಸ್ಲಿಂ ಎಲ್ಲರೂ ಒಂದೆ ತಾಯಿಯ ಮಕ್ಕಳಿದ್ದಂತೆ. ನಾವೆಲ್ಲರೂ ಭಾರತಿಯರು ಒಂದಾಗಿ ಬಾಳಬೇಕೆಂದು, ಸರ್ವಧರ್ಮದ ಹಿಂದೂ ಸ್ವಾಮೀಜಿಗಳು ಮತ್ತು ಇಸ್ಲಾಂ ಧರ್ಮದ ಮೌಲ್ವಿಗಳು ಇಂದು ನಗರದಲ್ಲಿ ಒಂದಾಗಿ ಕೈ ಕೈ ಹಿಡಿದು,, “ಸಾರೇ ಜಹಾನ ಸೆ ಅಚ್ಛಾ ಹಿಂದುಸ್ತಾನ ಹಮಾರಾ ಹಮ್ ಬುಲಬುಲೇನ್ ಹೈ ಇಸ್ ಕೆ, ಯೇ ಗುಲ್ಸೀತಾನ ಹಮಾರಾ ಯೇ ಗುಲ್ಸೀತಾನ ಹಮಾರಾ ಹಮಾರಾ..” ದೇಶಭಕ್ತಿ ಗೀತೆ ಹೇಳುವುದರ ಮೂಲಕ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ..