ರಾಜ್ಯ

ಸೋಮವಾರ ಒಂದೇ ದಿನ ಮತ್ತೇ 187 ಹೊಸ ಕೇಸ್ ಪತ್ತೆ : ಬೆಂಗಳೂರಿನಲ್ಲಿ ಒಂದು ಬಲಿ

ಬೆಂಗಳೂರು prajakiran.com : ರಾಜ್ಯದಲ್ಲಿ ಕರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸೋಮವಾರ ಒಂದೇ ದಿನ ಮತ್ತೇ 187  ಹೊಸ ಕೇಸ್ ಪತ್ತೆಯಾಗಿವೆ.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ 28 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 90 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ. 

ಆ ಮೂಲಕ ರಾಜ್ಯದ ಸಾವಿನ ಸಂಖ್ಯೆ 52ಕ್ಕೆ ಏರಿದ್ದು, ಬೆಂಗಳೂರಿನಲ್ಲಿಯೇ ಈವರೆಗೆ 12 ಜನ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.  

ಉಡುಪಿ ಜಿಲ್ಲೆಯೊಂದರಲ್ಲಿಯೇ ಇವತ್ತು 73 ಜನರಿಗೆ ಕರೋನಾ ಸೋಂಕು ವಕ್ಕರಿಸಿದ್ದು, ಅವರೆಲ್ಲರೂ ಮಹಾರಾಷ್ಟ್ರ ಹಾಗೂ ವಿದೇಶದಿಂದ ಬಂದವರೇ ಆಗಿದ್ದಾರೆ. ಆ ಮೂಲಕ ಉಡುಪಿ ಜಿಲ್ಲೆಯ ಸೋಂಕಿತರ ಸಂಖ್ಯೆ 260ಕ್ಕೆ ಎರಿಕೆಯಾಗಿದೆ.

  ಸೋಮವಾರ 28 ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 90 ವರ್ಷದ ವೃದ್ದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.  

ಅದೇ ರೀತಿ ಬಿಸಲನಾಡು ಕಲಬುರಗಿ 24, ಹಾಸನ 16, ಮಂಡ್ಯ 15, ಶಿವಮೊಗ್ಗ 9, ಚಿಕ್ಕಬಳ್ಳಾಪುರ 5, ದಕ್ಷಿಣ ಕನ್ನಡ 4, ಬಳ್ಳಾರಿ 3, ಬೀದರ 2, ಬಾಗಲಕೋಟೆ 2, ಧಾರವಾಡ 2, ಹಾವೇರಿ 1, ವಿಜಯಪುರ 1, ರಾಮನಗರದಲ್ಲಿ ತಲಾ ಒಂದು ಸೋಂಕು ಖಚಿತಗೊಂಡಿದೆ.

ಆ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 3408ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು 110 ಜನ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 1328 ಜನ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 2026 ಜನ ಸಕ್ರಿಯ ಪ್ರಕರಣಗಳಿವೆ.  

ಕಲಬರುಗಿಯಲ್ಲಿ 4 ತಿಂಗಳ ಹಸುಗೂಸಿಗೆ ಸೇರಿ 24ಜನರಿಗೆ ತಗುಲಿದ್ದು, ಜಿಲ್ಲೆಯ ಸೋಂಕಿತರ ಸಂಖ್ಯೆ 305 ಆಗಿದೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 385, ಮಂಡ್ಯದಲ್ಲಿ  285ಕ್ಕೆ ಏರಿದೆ.

PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *