ಚನ್ನಮ್ಮನ ಕಿತ್ತೂರು prajakiran.com : ಮೂರು ಜನ ಆಮೆ ಬೇಟೆಗಾರರನ್ನು ಬಂಧಿಸಿದ ಘಟನೆ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹತ್ತಿರ ನಡೆದಿದೆ.
ಕಿತ್ತೂರಿನ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಬಂಧಿತ ಆರೋಪಿಗಳನ್ನು ಧಾರವಾಡ ಜಿಲ್ಲೆಯ ವೆಂಕಟಾಪೂರ ಗ್ರಾಮದವರು ಎಂದು ಗುರುತಿಸಲಾಗಿದೆ.
ಗಿರಿರಾಜ ಈರಪ್ಪ ಕೊಣ್ಣೂರ(೪೮), ಯಲ್ಲಪ್ಪ ಮುದಕಪ್ಪ ಡೊಕ್ಕನ್ನವರ(೨೯), ಸಣ್ಣಮಂಜಪ್ಪ ರಾಜಪ್ಪ ಬಾದಗಿ(೫೨) ಆರೋಪಿಗಳು ೫ ಆಮೆಗಳನ್ನು ಬೇಟೆಯಾಡಿ ಸಾಗಿಸುವಾಗ ಡಿ ಎಫ್ ಓ ಅಮರನಾಥ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಧಿಕಾರಿ ಸಂಜಯ ಮಗದುಮ್ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಬೈಕ್, ಬಲಿ ಹಾಗೂ ಆಯುಧವನ್ನು ವಶಕ್ಕೆ ಪಡೆಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಎಸಿಎಫ್ ಜಿ ಸಿ ಮಿರ್ಜಿ, ಆರ್ ಎಫ್ ಓ ಶ್ರೀನಾಥ ಕಡೋಲ್ಕರ, ಅಜಯ ಭಾಸ್ಕರಿ, ಪ್ರಕಾಶ ಕಿರಬನವರ, ಗಿರೀಶ ಮೆಕ್ಕೇದ, ಮುಂತಾದವರು ಇದ್ದರು.