ಅಪರಾಧ

ಧಾರವಾಡ ಜಿಲ್ಲೆಯ ಮೂರು ಜನ ಆಮೆಗಳ ಬೇಟೆಗಾರರ ಬಂಧನ




ಚನ್ನಮ್ಮನ ಕಿತ್ತೂರು prajakiran.com : ಮೂರು ಜನ ಆಮೆ ಬೇಟೆಗಾರರನ್ನು ಬಂಧಿಸಿದ ಘಟನೆ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಹತ್ತಿರ ನಡೆದಿದೆ.

 ಕಿತ್ತೂರಿನ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಬಂಧಿತ ಆರೋಪಿಗಳನ್ನು ಧಾರವಾಡ ಜಿಲ್ಲೆಯ ವೆಂಕಟಾಪೂರ ಗ್ರಾಮದವರು ಎಂದು ಗುರುತಿಸಲಾಗಿದೆ.




ಗಿರಿರಾಜ ಈರಪ್ಪ ಕೊಣ್ಣೂರ(೪೮),  ಯಲ್ಲಪ್ಪ ಮುದಕಪ್ಪ ಡೊಕ್ಕನ್ನವರ(೨೯), ಸಣ್ಣಮಂಜಪ್ಪ ರಾಜಪ್ಪ ಬಾದಗಿ(೫೨) ಆರೋಪಿಗಳು ೫ ಆಮೆಗಳನ್ನು ಬೇಟೆಯಾಡಿ ಸಾಗಿಸುವಾಗ ಡಿ ಎಫ್ ಓ ಅಮರನಾಥ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಧಿಕಾರಿ ಸಂಜಯ ಮಗದುಮ್ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.

ಬಂಧಿತರಿಂದ ಒಂದು ಬೈಕ್, ಬಲಿ ಹಾಗೂ ಆಯುಧವನ್ನು ವಶಕ್ಕೆ ಪಡೆಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಎಸಿಎಫ್ ಜಿ ಸಿ ಮಿರ್ಜಿ, ಆರ್ ಎಫ್  ಓ ಶ್ರೀನಾಥ ಕಡೋಲ್ಕರ, ಅಜಯ ಭಾಸ್ಕರಿ, ಪ್ರಕಾಶ ಕಿರಬನವರ, ಗಿರೀಶ ಮೆಕ್ಕೇದ, ಮುಂತಾದವರು ಇದ್ದರು.



PK Team
prajakiran.com ಹಾಗೂ prajakiran YouTube channel ಯಶಸ್ವಿಯಾಗಿ ಮೂರು ವರ್ಷ ಪೂರೈಸಿ ನಾಲ್ಕನೇ ವಸಂತಕ್ಕೆ ಕಾಲಿಟ್ಟಿದೆ. ನಿಮ್ಮ ನೆಚ್ಚಿನ Prajakiran.com 50 ಲಕ್ಷ ಓದುಗರನ್ನು ಹೊಂದಿದರೆ, Prajakiran ಯೂಟ್ಯೂಬ್ ಚಾನಲ್ 1.25 ಕೋಟಿ ವೀಕ್ಷಕರನ್ನು ಹೊಂದಿದೆ. ಫೇಸ್ ಬುಕ್ ಫೇಜ್ follow/like: Prajakiran News ಐದು ಸಾವಿರ ಗಡಿ ದಾಟಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರ ಋಣಿ. ನಾಗರಾಜ ಕಿರಣಗಿ
http://prajakiran.com

Leave a Reply

Your email address will not be published. Required fields are marked *