ಧಾರವಾಡ prajakiran.com: ಇಸ್ಪೀಟ್ ಆಡುತ್ತಿದ್ದ ಪೊಲೀಸ ಪೇದೆಗಳು ಬಲೆಗೆ ಬಿದ್ದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಧಾರವಾಡ ಗ್ರಾಮೀಣ ಡಿಎಸ್ಪಿ ರವಿ ನಾಯಕ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಬಲೆಗೆ ಬಿದ್ದ ಪೊಲೀಸರು ಗರಗ ಹಾಗೂ ಡಿಎಆರ್ ಪೇದೆಗಳು ಎಂದು ತಿಳಿದುಬಂದಿದೆ.
ಮಮ್ಮಿಗಟ್ಟಿ ಬಳಿಯ ಉಡುಪಿ ಹೋಟೆಲ್ ಹಿಂದಿರುವ ಕೋಣೆಯಲ್ಲಿ ಜೂಜಾಟವಾಡುತ್ತಿದ್ದರು. ಸ್ಥಳೀಯರೊಂದಿಗೆ ಇಸ್ಪೀಟ್ ಆಡುತ್ತಿದ್ದ ಪೊಲೀಸ್ ಪೇದೆಗಳು. ದಾಳಿ ಆಗುತ್ತಿದ್ದಂತೆಯೇ ಪೊಲೀಸ್ ಪೇದೆಗಳಷ್ಟೇ ಪರಾರಿಯಾಗಿದ್ದಾರೆ.
ಡಿಎಆರ್ ಪೇದೆಗಳಾದ ಮೈನುದ್ದೀನ್ ಮುಲ್ಲಾ, ಶಂಕರ ಭಜಂತ್ರಿ, ಬಸವರಾಜ ಮಠದ, ವರ್ಧಮಾನ ಹಟಿಂಗಳಿ, ಆರ್.ಎಸ್.ಜಂಗನವರ, ಹುಲಿಗೆಪ್ಪ ದೊಡಮನಿ, ಮಲ್ಲಿಕಾರ್ಜುನ ಶಿರೂರ ಎಂದು ಗುರುತಿಸಲಾಗಿದೆ.
ಅಲ್ಲದೆ, ಗರಗ ಪೊಲೀಸ್ ಠಾಣೆಯ ಪೇದೆಗಳಾದ ಆತ್ಮಾನಂದ ಬೆಟಗೇರಿ, ಮಂಜುನಾಥ ನಾಗಾವಿ, ಧಾರವಾಡ ಗ್ರಾಮೀಣ ಠಾಣೆಯ ಪೇದೆ ಸೈಯ್ಯದ್ ಸಾಬ್ ಇಸ್ಮಾಯಿಲ್ ಪರಾರಿಯಾದ ಪೊಲೀಸ್ ಪೇದೆಗಳು.
ಇನ್ನು ಸ್ಥಳೀಯ ಅನಿಲ್ ಉಳ್ಳನ್ನವರ ಬಂಧನ ಮಾಡಲಾಗಿದೆ. ಬಂಧಿತರಿಂದ 35 ಸಾವಿರ ಹಣ, 5 ಮೋಟಾರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ತನಿಖೆ ಮುಂದುವರೆದಿದೆ.