ಧಾರವಾಡ prajakiran.com :
2021-22ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ೬ ತಿಂಗಳ ಶಿಶುಪಾಲನಾ ರಜೆಯನ್ನು ಘೋಷಣೆ ಮಾಡಿದ್ದಾರೆ.
ಆದರೆ, ಈವರೆಗೂ ಅದರ ಸರಕಾರಿ ಆದೇಶ ಹೊರಡಿಸಿಲ್ಲ.ಹೀಗಾಗಿ ಅತೀ ಶೀಘ್ರದಲ್ಲಿ ರಾಜ್ಯ ಮಹಿಳಾ ನೌಕರರಿಗೆ ‘೬ ತಿಂಗಳ ಶಿಶುಪಾಲನಾ ರಜೆ’ ಯ ಸರ್ಕಾರಿ ಆದೇಶವನ್ನು ಮಾಡಿಕೊಡಬೇಕು
ಆ ಮೂಲಕ ಮಹಿಳಾ ಸರಕಾರಿ ನೌಕರರಿಗೆ ಅದರಲ್ಲೂ ಶಿಕ್ಷಕಿಯರ ಬಹು ವರ್ಷಗಳ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು
ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಕರ್ನಾಟಕ ರಾಜ್ಯ ಸಾವಿತ್ರಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷೆ ಲತಾ. ಎಸ್. ಮುಳ್ಳೂರ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ
ಶ್ರೀಮತಿ ಜ್ಯೋತಿ.ಹೆಚ್.
ಮನವಿ ಮಾಡಿದ್ದಾರೆ.