ಧಾರವಾಡ prajakiran.com : ರಾಸಾಯನಿಕ ಹೊತ್ತ ಟ್ಯಾಂಕರ್ ಪಲ್ಟಿಯಾದ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಶನಿವಾರ ನಡೆದಿದೆ.
ಇದರಿಂದಾಗಿ ಭಾರಿ ಅನಾಹುತವೊಂದು ತಪ್ಪಿದಂತಾಗಿದ್ದು, ಮುಮ್ಮಿಗಟ್ಟಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಮುಂಬೈದಿಂದ ಹುಬ್ಬಳ್ಳಿ ಗೆ ಬರುತ್ತಿದ್ದ ಈ ಟ್ಯಾಂಕರ್ ಬೆಳಗಿನ ಜಾವ ಮುಮ್ಮಿಗಟ್ಟಿ ರಾಷ್ಟ್ರೀಯಹೆದ್ದಾರಿ 4 ರಲ್ಲಿ ಪಲ್ಟಿಯಾಗಿದೆ.
ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಗರಗ ಪೋಲೀಸರ ಮುನ್ನಚ್ಚರಿಕ್ಕೆಯ ಪರಿಣಾಮದಿಂದ ಭಾರಿ ಅನಾಹುತ ತಪ್ಪಿದೆ.
ಮುಂಜಾಗ್ರತೆಯ ನಿಟ್ಟಿನಲ್ಲಿ ಟ್ಯಾಂಕರ್ ಹತ್ತಿರ ಯಾರನ್ನು ಬಿಡುತ್ತಿಲ್ಲವೆಂದು ಪೊಲೀಸರು ಮೂಲಗಳಿಂದ ತಿಳಿದು ಬಂದಿದೆ.