ರಾಯಚೂರು prajakiran.com : ಕರೋನಾ ಅಟ್ಟಹಾಸವನ್ನು ಲೆಕ್ಕಸದೆ ಸದಾ ಕಾಲವೂ ಜನ ಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನೋಂದಣಾಧಿಕಾರಿಯನ್ನೇ ಕರೋನಾ ಬಲಿ ಪಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕು ಉಪನೋಂದಣಿ ಅಧಿಕಾರಿಯಾಗಿದ್ದ 44 ವರ್ಷ ಮಗ ಕರೋನಾಕ್ಕೆ ಬಲಿಯಾಗಿದ್ದಾರೆ.
ಹೈದ್ರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಅವರು ಶನಿವಾರ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಮಗನ ಸಾವಿನ ಸುದ್ದಿ ಕೇಳಿ ತಾಯಿ ಕೂಡ ರಾಯಚೂರಿನ ಮನೆಯಲ್ಲಿ ಸಾವನ್ನಪ್ಪಿದ್ದಾರೆ.
ಇದರಿಂದಾಗಿ ಅವರ ಮನೆಯಲ್ಲಿ ಸಾವಿನ ಸೂತಕ ಆವರಿಸಿದೆ. ಸಬ್ ರಿಜಿಸ್ಟಾರ್ ಕಚೇರಿ ಸಿಬ್ಬಂದಿಯನ್ನು ಕರೋನಾ ಟೆಸ್ಟ್ ಗೆ ಒಳಪಡಿಸಲಾಗಿದ್ದು, ಮುಂಜಾಗ್ರತ ಕ್ರಮವಾರಿ ಮಾನ್ವಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.
ಇದು ರಾಜ್ಯದ ಉಪನೋಂದಣಾಧಿಕಾರಿಯನ್ನು ಬಲಿ ಪಡೆದ ಮೊಟ್ಟ ಮೊದಲ ಪ್ರಕರಣವಾಗಿದೆ.
ಸಾಮಾಜಿಕಅಂತರ ವನ್ನು ಮರೆತು ಜನರ ನೂಕು ನುಗ್ಗಲಿನಿಂದ ಕೂಡಿರುವ ರಾಜ್ಯದ ಬಹುತೇಕ ಸಬ್ ರಿಜಿಸ್ಟಾರ್ ಕಚೇರಿಗಳು ಹಾಗೂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
ಇಲ್ಲದಿದ್ದರೆ ಕರೋನಾ ರಣಕೇಕೆ ಇನ್ನಷ್ಟು ಅವಾಂತರ ಹಾಗೂ ಅವಘಡಗಳನ್ನು ತಂದಿಡುವುದರಲ್ಲಿ ಯಾವುದೇ ಅನುಮಾನವಿಲ್ಲ.