ಧಾರವಾಡ Prajakiran.com : ಧಾರವಾಡ ಜಿ.ಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಆ ಮೂಲಕ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಮತ್ತೊಂದು ಬಿಗ್ ಶಾಕ್ ನೀಡಿದ ಸಿಬಿಐ ಇಂದು ವಿನಯ್ ಕುಲಕರ್ಣಿ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಇಂದು ವಿಚಾರಣೆ ಬರಲಿದೆ.
ಈ ಹೊತ್ತಲ್ಲಿ ವಿನಯ್ ಕುಲಕರ್ಣಿ ಗೆ ಸಿಬಿಐ ಬಿಗ್ ಶಾಕ್ ನೀಡಿದೆ.
ಮಾಜಿ ಸಚಿವ ವಿನಯ್ ಕುಲಕರ್ಣಿಯ ಮಾಜಿ ಆಪ್ತ ಕಾರ್ಯದರ್ಶಿಯ ಬಂಧಿಸಿದ ಸಿಬಿಐ.
ಕೆ.ಎಎಸ್ ಅಧಿಕಾರಿ ಸೋಮು ನ್ಯಾಮಗೌಡ ಈ ಹಿಂದೆ
ವಿನಯ್ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಕಾರ್ಯದರ್ಶಿ ಯಾಗಿದ್ದರು.
ಯೋಗೇಶ್ ಗೌಡನ ಹತ್ಯೆ ಸಂದರ್ಭದಲ್ಲಿ ಸೋಮು ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದರು.
ಮೂರು ವರ್ಷಗಳ ಕಾಲ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ.
ಸೂಕ್ತ ಸಾಕ್ಷ್ಯಾಧಾರಗಳ ಸಮೇತ ಸೋಮು ಬಂಧಿಸಿದ ಸಿಬಿಐ. ನಿದ್ರೆ ಮಂಪರಿನಲ್ಲಿದ್ದ ಸೋಮು ಬಡಿದೆಬ್ಬಿಸಿದ ಸಿಬಿಐ.
ವಿನಯ್ ಕುಲಕರ್ಣಿ ಆಪ್ತರಲ್ಲಿ ಶುರುವಾಯಿತು ಮತ್ತಷ್ಟು ಆತಂಕ.
ಯೋಗೇಶ್ ಗೌಡನ ಹತ್ಯೆಯ ಪೂರ್ವ ಎಲ್ಲ ಮಾಹಿತಿ ಸೋಮುಗೆ ಗೊತ್ತಿತ್ತು.
ಹತ್ಯೆ ಪ್ರತಿ ಇಂಚಿಂಚು ಮಾಹಿತಿ ಸೋಮು ನ್ಯಾಮಗೌಡರಿಗೆ ಗೊತ್ತಿತ್ತು.
ಹತ್ಯೆಗೂ ಮುನ್ನ ವಿನಯ್ ಕುಲಕರ್ಣಿ ದೆಹಲಿ ಟೂರ್ ಪ್ಲಾನ್ ಆರೇಂಜ್ ಮಾಡಿದ್ದ ಸೋಮು ನ್ಯಾಮಗೌಡ.
ಹತ್ಯೆಯ ಎರಡು ದಿನ ಮುಂಚಿತವಾಗಿ
ವಿನಯ್ ಕುಲಕರ್ಣಿ ನಕಲಿ ಪ್ರವಾಸದ ವೇಳಾ ಪಟ್ಟಿ ತಯಾರಿಸಿದ್ದ.
ಹತ್ಯೆ ನಡೆದ ಮೇಲೆ ತಮ್ಮ ಮೇಲೆ ಬರಬಾರದು ಅಂತ ದೆಹಲಿ ಪ್ರವಾಸದ ನಾಟಕವಾಡಿದ್ದರು.
ಅಷ್ಟೇ ಅಲ್ಲ ದೆಹಲಿ ಪ್ರವಾಸದಲ್ಲಿ ಇದ್ದರು ಎಂದು ಬಿಂಬಿಸಲು ವಿಮಾನದ ಟಿಕೆಟ್ ಬುಕ್ ಮಾಡಿದ್ದ.
ಆದ್ರೇ ಮಾಜಿ ಸಚಿವ ವಿನಯ್ ಕುಲಕರ್ಣಿ ದೆಹಲಿಗೆ ಹೋಗಿರಲಿಲ್ಲ.
ಬೆಂಗಳೂರಿನ ಮೌರ್ಯ್ಯ ಹೋಟೆಲ್ ನಲ್ಲಿಯ ತಂಗಿದ್ದರು.
ಯೋಗೇಶ್ ಗೌಡನ ಹತ್ಯೆಯ ಆರೋಪಿಗಳನ್ನು ಅದೇ ರಾತ್ರಿ ಭೇಟಿಯಾಗಿದ್ದ ಸೋಮು ನ್ಯಾಮಗೌಡ, ಹಾಗು ವಿನಯ್ ಕುಲಕರ್ಣಿ.