ಧಾರವಾಡ prajakiran. com : ಹೊಲದಲ್ಲಿ ಇರುವ ನೇಗಿಲು ತರಲು ಹೊಗಿ ಮಳೆಯಿಂದ ರೈತ ಯಲ್ಲನಗೌಡ ನಾಗನಗೌಡ ಭರಮಗೌಡರ ಕೊಚ್ಚಿ ಹೋಗಿ ಹಳ್ಳದ ಪಾಲಾದ ಘಟನೆ ಧಾರವಾಡ ತಾಲೂಕಿನ ಕಬ್ಬನೂರಿನಲ್ಲಿ ನಡೆದಿದೆ.
ಹಳ್ಳದಲ್ಲಿ ತೇಲಿ ಹೋದ ರೈತನ ಮೃತದೇಹ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಳ್ಳಿಗೇರಿಯಲ್ಲಿ ಪತ್ತೆಯಾಗಿದ್ದು ರೈತನ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿತ್ತು.
ಮೃತ ರೈತನಿಗೆ ಸಣ್ಣ ವಯಸ್ಸಿನ ಎರಡು ಮಕ್ಕಳು ಇದ್ದು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.
ಇದರಿಂದಾಗಿ ರೈತನ ಜಮೀನು ಅಕ್ಕಪಕ್ಕದ ಹಳ್ಳಿಯ ಜನರು ಆತಂಕಗೊಂಡಿದ್ದಾರೆ.