ಧಾರವಾಡ prajakiran. com : ಧಾರವಾಡದ ಸಂಚಾರಿ ಠಾಣೆ ಪೊಲೀಸ್ ಇನ್ಸಪೆಕ್ಟರ್ ಮಲ್ಲನಗೌಡ ನಾಯ್ಕರ್ ಅವರ ತಂಡ, ಮಾರು ವೇ಼ಷದ ರಹಸ್ಯ ಕಾರ್ಯಾಚರಣೆ ನಡೆಸಿ, ಹೆಚ್ಚಿನ ದರ ವಸೂಲು ಮಾಡುತ್ತಿದ್ದ ಆರು ಆಟೋಗಳನ್ನು ವಶಕ್ಕೆ ತೆಗೆದುಕೊಂಡಿದೆ.
ಧಾರವಾಡದ ಸಂಚಾರಿ ಠಾಣೆಯ ಎಎಸ್ಐ ವೀರೇಶ ಬಳ್ಳಾರಿ, ಸಿಬ್ಬಂದಿಗಳಾದ ಶಿವಾನಂದ ಚೆಲವಾದಿ, ಶಂಕರಗೌಡ ಪಾಟೀಲ, ಶಿವಾನಂದ ಸುತಗಟ್ಟಿ, ಮಹಾಂತೇಶ ಹೆಗ್ಗಣ್ಣನವರ, ಬಸವರಾಜ ಉಳ್ಳಿಗೇರಿ, ಎನ್.ಎಲ್.ಮುಕಿ ಈ ಮಾರುವೇಷದ ರಹಸ್ಯ ಕಾರ್ಯಾಚರಣೆಯಲ್ಲಿದ್ದರು.
ಧಾರವಾಡದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣವನ್ನ ಆಟೋದವರು ಪಡೆಯುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ಕೈಗೊಂಡರು
ಪೊಲೀಸರು ಮಾರು ವೇಷದಲ್ಲಿ ಆಟೋದಲ್ಲಿ ಹೋದಾಗಲೂ ಹೆಚ್ಚು ಹಣವನ್ನ ಪಡೆಯಲಾಗಿದೆ.
ಇದರಿಂದಾಗಿ ತಕ್ಷಣವೇ ಆರು ಆಟೋಗಳನ್ನ ವಶಕ್ಕೆ ಪಡೆದಿರುವ ಧಾರವಾಡದ ಪೊಲೀಸರ ಮಿಂಚಿನ ಕಾರ್ಯಾಚರಣೆ ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ